Posts Slider

Karnataka Voice

Latest Kannada News

ಕೊಲೆಯಾಗಿದ್ದು ಹೇಗೆ ಗೊತ್ತಾ.. ಇಲ್ಲಿದೆ ನೋಡಿ ಸಿಸಿಟಿವಿ ದೃಶ್ಯಾವಳಿಗಳು

1 min read
Spread the love

ಹುಬ್ಬಳ್ಳಿ: ಒಂದು ಕಾಲದ ಸ್ಪೀರಿಟ್ ಕಿಂಗ್ ಎಂದೇ ಕುಖ್ಯಾತಿ ಪಡೆದು ಗೂಂಡಾ ಕಾಯ್ದೆಯಡಿ ಬಂಧಿತನಾಗಿದ್ದ ರಮೇಶ ಭಾಂಡಗೆಯನ್ನ ಕೊಲೆ ಮಾಡಿದ್ದು ಹೇಗೆ ಎಂಬುದು ನಿಮಗೆ ಗೊತ್ತಾ. ಬಂದವರು ಚೂರಿ ಹಾಕಿದ್ದು ಹೇಗೆ ಗೊತ್ತಾ.. ಅದೇಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಎಕ್ಸಕ್ಲೂಸಿವ್ ದೃಶ್ಯಾವಳಿಗಳು

ಹುಬ್ಬಳ್ಳಿಯ ರೌಡಿ ಷೀಟರ್ ಆಗಿದ್ದ ರಮೇಶ ಭಾಂಡಗೆ ಇತ್ತೀಚಿನ ದಿನಗಳಲ್ಲಿ ಹಲವು ಭೂ ವಿವಾದಗಳಲ್ಲಿ ತೊಡಗಿಕೊಂಡಿದ್ದ. ಗಬ್ಬೂರ ಬೈಪಾಸ್ ಬಳಿಯ ಒಂದೂವರೆ ಎಕರೆಯ ಜಮೀನಿಗಾಗಿ ಸಾಕಷ್ಟು ದಿನಗಳಿಂದ ನ್ಯಾಯ ನಡೆದಿತ್ತು. ಅಷ್ಟೇ ಅಲ್ಲ, ಕೆಲವು ಲಿಟೀಗೇಶನ್ ಪ್ರಾಪರ್ಟಿ ವಿಷಯದಲ್ಲೂ ರಮೇಶ ಮೂಗು ತೂರಿಸುತ್ತಿದ್ದ ಎಂದು ಹೇಳಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಶಹರ ಠಾಣೆ ಪೊಲೀಸರು ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದು, ಸಿಸಿಟಿವಿ ದೃಶ್ಯಾಗಳನ್ನ ಗಮನಿಸಿ ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ. ರಮೇಶ ಭಾಂಡಗೆಯನ್ನ ಹಲವು ಬಾರಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದು, ಕಿಮ್ಸಗೆ ಸಾಗಿಸುವಾಗ ಮೃತಪಟ್ಟಿರುವುದು ಗೊತ್ತಾಗಿದೆ.


Spread the love

Leave a Reply

Your email address will not be published. Required fields are marked *