Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಮೂರು ಮಕ್ಕಳ ತಂದೆ ಕೊಲೆ

ಹುಬ್ಬಳ್ಳಿ: ಮರಳಿನ ದಂಧೆಯ ಕಡಿವಾಣ ಬಿದ್ದ ತಕ್ಷಣವೇ ಬೇರೆ ವ್ಯಾಪಾರ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನ ಎದೆಗೆ ಗುದ್ದಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಗಿರಣಿಚಾಳದಲ್ಲಿ ನಡೆದಿದೆ.

ಗಿರಣಿಚಾಳ ನಿವಾಸಿಯಾಗಿರುವ ರವಿ ಮುದ್ದಿನಕೇರಿ ಎಂಬಾತನೇ ಕೊಲೆಯಾಗಿದ್ದು, ಕಳೆದ ರಾತ್ರಿ ರವಿ ಮುದ್ದಿನಕೇರಿಯೊಂದಿಗೆ ಜಗಳಕ್ಕೆ ಇಳಿದಿದ್ದ ವಿಜಯ ಆಲೂರ ಎಂಬಾತನೇ ಮನಸೋ ಇಚ್ಚೆ ಹೊಡೆದಿದ್ದಾನೆ.

ಕಂಡ ಕಂಡಲ್ಲಿ ಒದ್ದು ಎದೆಗೆ ಗುದ್ದಿದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ರವಿಯನ್ನ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆ.

ಆರೋಪಿ ವಿಜಯ ಆಲೂರ ಪರಾರಿಯಾಗಿದ್ದು, ಕಿಮ್ಸಗೆ ಡಿಸಿಪಿ ರಾಮರಾಜನ್ ಭೇಟಿ ನೀಡಿದ್ದಾರೆ. 38 ವಯಸ್ಸಿನ ರವಿಗೆ ಮೂರು ಮಕ್ಕಳಿದ್ದು, ಮರಳಿನ ದಂಧೆಗೆ ಬ್ರೇಕ್ ಬಿದ್ದ ಪರಿಣಾಮ ಗದಗ ರಸ್ತೆಯಲ್ಲಿ ದಾಬಾ ತೆಗೆಯಲು ಮುಂದಾಗಿದ್ದ. ಅಷ್ಟರಲ್ಲೇ ಆತನದ್ದೇ ಕೊಲೆಯಾಗಿದೆ.

ಘಟನೆಯ ಬಗ್ಗೆ ಹುಬ್ಬಳ್ಳಿ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಜಯ ಆಲೂರಗಾಗಿ ಹುಡುಕಾಟ ನಡೆದಿದೆ.

Leave a Reply

Your email address will not be published. Required fields are marked *