“ಈದ್-ಮಿಲಾದ” ಡಿಜೆ ಬೇಡವೆಂದಿದ್ದ ಹುಬ್ಬಳ್ಳಿ ಧಾರವಾಡ “ಅಂಜುಮನ್”- ಡಿಜೆ ಪರವಾನಿಗೆ ಕೊಡಿಸಲಾಗಿದೆ ಎಂದ “ಅಬ್ದುಲ್ ದೇಸಾಯಿ”…. ಹೊಸ ರಗಳೆಗೆ ನಾಂದಿ…!?
ಧಾರವಾಡ: ಈದ್ ಮಿಲಾದ ಸಮಯದಲ್ಲಿ ಡಿಜೆಗೆ ಅವಕಾಶ ನೀಡಬಾರದೆಂದು ವಾರಗಳ ಹಿಂದಷ್ಟೇ ಹುಬ್ಬಳ್ಳಿ ಮತ್ತು ಧಾರವಾಡದ ಅಂಜುಮನ್ ಸಂಸ್ಥೆಗಳು ಪೊಲೀಸ್ ಕಮೀಷನರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಇಂದು ಹೊಸದೊಂದು ವೀಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ದೇಸಾಯಿ, ಯುವಕರನ್ನ ಉದ್ದೇಶಿಸಿ ಮಾತನಾಡಿದ್ದಾರೆ. ಅದರಲ್ಲಿ ಶಾಸಕ ವಿನಯ ಕುಲಕರ್ಣಿ ಅವರು, ಗೃಹ ಸಚಿವರಿಗೆ ಮತ್ರು ಸಿಎಂ ಅವರಿಗೆ ಮಾತನಾಡಿದ್ಸಾರೆಂದು ಉಲ್ಲೇಖಿಸಿದ್ದಾರೆ.
ಯುವಕರಿಗೆ ಡಿಜೆ ಪರವಾನಿಗೆಯನ್ನ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಕೊಡ್ತಾರಾ ಅಥವಾ ಅಂಜುಮನ್ ಸಂಸ್ಥೆಗಳು ಮನವಿಗೆ ಸ್ಪಂಧಿಸುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.
