Karnataka Voice

Latest Kannada News

“ಕಮೀಷನರ್ ರುದ್ರೇಶ ಘಾಳಿ” ಹಿಂದು ವಿರೋಧಿ ಎಂದು ಧಿಕ್ಕಾರ ಕೂಗಿದ EX DM ಸಂತೋಷ ಚವ್ಹಾಣ… ಪ್ರಮುಖರ ಸಾಥ್…

Spread the love

ಪುಷ್ಕರಣಿ ಜಾಗದ ಅತಿಕ್ರಮಣ ತೆರವುಗೊಳಿಸಲು ಆಗ್ರಹಿಸಿ ಬಿಜೆಪಿ ಪಾಲಿಕೆ ಸದಸ್ಯರ ಪ್ರತಿಭಟನೆ

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಐತಿಹಾಸಿಕ ಭವಾನಿಶಂಕರ ದೇವಸ್ಥಾನದ ಪುಷ್ಕರಣಿ ಜಾಗದಲ್ಲಿ ಅತಿಕ್ರಮಣ ಮಾಡಿ ನಿರ್ಮಿಸಿರುವ ರಸ್ತೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಭಾರತೀಯ ಜನತಾ ಪಕ್ಷದ ಮಹಾನಗರ ಪಾಲಿಕೆ ಸದಸ್ಯರು ಸೋಮವಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿರುವ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪುಷ್ಕರಣಿಯ ಜಾಗವನ್ನು ಅತಿಕ್ರಮಣದಿಂದ ಮುಕ್ತಗೊಳಿಸಿ, ಐತಿಹಾಸಿಕ ಸ್ಥಳದ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮಹಾನಗರ ಪಾಲಿಕೆ ಆಡಳಿತವು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ರಾಧಾಭಾಯಿ ಸಫಾರೆ, ಚಂದ್ರಿಕಾ ಮೆಸ್ತ್ರಿ, ಚಂದ್ರಕಲಾ ಕೊಟಬಾಗಿ, ಸುನಿತಾ ಮಾಳವದಕರ, ವಿಜಯಾನಂದ ಶೆಟ್ಟಿ, ರೂಪಾ ಶೆಟ್ಟಿ, ಅನಿತಾ ಚಳಗೇರಿ, ರಾಜಣ್ಣ ಕೊರವಿ, ಮಹಾದೇವಪ್ಪ ನರಗುಂದ, ಭೀರಪ್ಪ ಖಂಡೇಕರ, ಮಲ್ಲಿಕಾರ್ಜುನ ಗುಂಡೂರ, ಶಂಕರ ಶೇಳಕೆ, ಶೀಲಾ ಕಾಟಕರ, ಪೂಜಾ ಶೇಜವಾಡಕರ, ಶಾಂತಾ ಹಿರೇಮಠ, ಉಮಾ ಮುಕುಂದ, ಸುರೇಶ ಬೇದ್ರೆ, ವಿಷ್ಣು ಕೊರಳ್ಳಿ, ಚಂದ್ರಶೇಖರ ಮನಗುಂಡಿ, ಮಂಜು ಪಟ್ಟಣ್ಣವರ, ಉಮೇಶ ಕೌಜಗೇರಿ, ಸುಮಿತ್ರಾ ಗುಂಜಾಳ ಸೇರಿದಂತೆ ರಾಮಣ್ಣ ಬಡಿಗೇರ ಹಾಗೂ ಸತೀಶ ಹಾನಗಲ್ ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ರಾಜು ಕೋರ್ಯಾಣಮಠ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *