ಹುಬ್ಬಳ್ಳಿ ಆರ್ ಟಿಓ ಕಚೇರಿಯಲ್ಲಿ ನಡೆಯುತ್ತಿರುವುದೇನು…!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಹುಬ್ಬಳ್ಳಿ: ಗಬ್ಬೂರು ಬೈಪಾಸ್ ಬಳಿಯಲ್ಲಿರುವ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ವಿನೂತನವಾದ ಕಾರ್ಯಕ್ರಮವೊಂದನ್ನ ಆಯೋಜನೆ ಮಾಡಲಾಗಿತ್ತು.
ವೀಡಿಯೋ ಇದೆ ನೋಡಿ..
32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಕಣ್ಣಿನ ತಪಾಸಣೆಯನ್ನ ಮಾಡಿಸುವ ಕಾರ್ಯಕ್ರಮಕ್ಕೆ ಡಾ.ಅಗರವಾಲ್ ಐ ಹಾಸ್ಪಿಟಲ್ ಸಹಯೋಗ ನೀಡಿತ್ತು.
ಕಚೇರಿಯ ಸಿಬ್ಬಂದಿಗಳು ಸೇರಿದಂತೆ ಹಲವು ಚಾಲಕರಿಗೂ ನೇತ್ರ ತಪಾಸಣೆ ಮಾಡುವ ಮೂಲಕ ವಿಭಿನ್ನವಾಗಿ ರಸ್ತೆ ಸುರಕ್ಷತಾ ಮಾಸಾಚರಣೆಯನ್ನ ನಡೆಸಲು ಅಪ್ಪಯ್ಯ ನಾಲ್ವತವಾಡಮಠ ಅವರು ಮುಂದಾಗಿದ್ದರು.
ದೇಹದ ಹಲವು ಭಾಗಗಳಿಗೆ ಎಷ್ಟು ಪ್ರಾಮುಖ್ಯತೆ ಇದೇಯೋ ಅದೇಲ್ಲವಕ್ಕೂ ಕಳಶವಿಟ್ಟಂತೆ ಕಣ್ಣಿನ ತಪಾಸಣೆ ಮಾಡುವುದು ಮುಖ್ಯ. ಇಂತಹ ಕಾರ್ಯಕ್ರಮಕ್ಕೆ ಸಪೋರ್ಟ್ ನೀಡಿದ ಎಲ್ಲರಿಗೂ ಧನ್ಯವಾದವನ್ನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದರು.
ಪ್ರಾದೇಶಿಕ ಕಚೇರಿಯ ಅಧಿಕಾರಿಗಳಾದ ವೈ.ಎನ್.ಮಸರಕಲ್ಲ, ವಿನಾಯಕ ನಾಯಕ, ಕಪ್ಪರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
