Karnataka Voice

Latest Kannada News

ಜೊತೆಗಾರನನ್ನ ಕೊಂದು ಹುಬ್ಬಳ್ಳಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಇಬ್ಬರನ್ನ ಹೆಡಮುರಿಗೆ ಕಟ್ಟಿದ ಕುಮಟಾ ಪೊಲೀಸರು…!!!

ಕೊಲೆ ಮಾಡಿ, ಆತನ ಮೊಬೈಲ್ ಎತ್ತಿಕೊಂಡು ಹೋದರು

ಅದೇ ಸಾಕ್ಷ್ಯ ನುಡಿಯತೊಡಗಿತು 

ಕುಮಟಾ: ಸರಕಾರಿ ಆಸ್ಪತ್ರೆಯಲ್ಲಿ ಗಾರೆ ಕೆಲಸಕ್ಕೆ ಬಂದಿದ್ದ ಕಾರ್ಮಿಕನೋರ್ವನ ಕೊಲೆ‌ ಪ್ರಕರಣದಲ್ಲಿ ಸಾವಿಗೀಡಾದವನ ಮೊಬೈಲ್‌ನಿಂದ್ಲೇ ಆರೋಪಿಗಳು ಪೊಲೀಸರ ಕೈಗೆ ಸಿಕ್ಕು ಬಿದ್ದಿರುವ ಘಟನೆ ಸಂಭವಿಸಿದೆ.

ವೀಡಿಯೋ ಪೂರ್ಣ ನೋಡಿ…

ಕುಮಟಾದ ಸರಕಾರಿ ಆಸ್ಪತ್ರೆಯ ಕೆಲಸಕ್ಕಾಗಿ ಕಳೆದ ಒಂದು ತಿಂಗಳಿಂದ ಹುಬ್ಬಳ್ಳಿಯಿಂದ ಆಗಮಿಸಿದ ನಾಲ್ವರು, ಗಾರೆ‌ ಕೆಲಸ ಮಾಡಿಕೊಂಡಿದ್ದರು. ನಿನ್ನೆ (ರವಿವಾರ ರಾತ್ರಿ) ನಾಲ್ವರು ಕುಡಿದು ಗಲಾಟೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಈ ವೇಳೆ ನಾಲ್ವರ ಪೈಕಿ ಮೊಯದ್ದೀನ್ ಎಂಬಾತ ಊಟ ಮಾಡಿ ನಿದ್ರೆ ಮಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಇನ್ನಿಬ್ಬರಾದ ಮೌನೇಶ್ ಹಾಗೂ ಸಾಧಿಕ್ ಇಮ್ತಿಯಾಜ್ ಜೊತೆ ಗಲಾಟೆ ನಡೆದು, ಜಗಳ ವಿಕೋಪಕ್ಕೆ ತಿರುಗಿ ಮೌನೇಶ್ ಹಾಗೂ ಸಾಧಿಕ್ ಇಬ್ಬರೂ ಸೇರಿ ಇಮ್ತಿಯಾಜ್‌‌ ಎಂಬಾತನಿಗೆ ಕಲ್ಲಿನಿಂದ ಜಜ್ಜಿ ಕೊಲೆ‌ ಮಾಡಿದ್ದಾರೆ‌.

ಆರೋಪಿಗಳು ಪರಾರಿಯಾಗುವ ವೇಳೆ ಕೊಲೆಯಾದ ಇಮ್ತಿಯಾಜ್ ಬಳಸುತ್ತಿದ್ದ ಮೊಬೈಲನ್ನೇ ಎತ್ತಿಕೊಂಡು ಪರಾರಿಯಾಗಿದ್ದಾರೆ. ಘಟನೆ ಬಳಿಕ ತನಿಖೆಗಿಳಿದ ಪೊಲೀಸರು ಇಮ್ತಿಯಾಜ್ ಮೊಬೈಲ್‌ಗಾಗಿ ಹುಡುಕಾಟ ನಡೆಸಿದ್ದು.‌ ಈ ವೇಳೆ ಮೊಬೈಲ್ ಆರೋಪಿಗಳೆ ಎತ್ತಿಕೊಂಡು ಹೋಗಿದ್ದು ಬೆಳಕಿಗೆ ಬಂದಿದೆ. ಆ ಮೊಬೈಲ್ ಸಿಗ್ನಲ್ ಆಧಾರಲ್ಲೆ‌ ಪೊಲೀಸರು‌ ಹುಬ್ಬಳ್ಳಿಗೆ ತೆರಳಿ ಇಬ್ಬರೂ ಕೊಲೆ ಆರೋಪಿಗಳನ್ನ ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *