Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ಕುಲಕರ್ಣಿ” ಕಾರು ಅಡ್ಡಗಟ್ಟಿ ಚಿನ್ನದ ಸರ ದರೋಡೆ..!


Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67

ಎಕ್ಸಕ್ಲೂಸಿವ್ ಬೈಟ್..

ಹುಬ್ಬಳ್ಳಿ: ನಗರದ ಹೊರವಲಯದ ರಿಲೆಯನ್ಸ್ ಪ್ರೇಶ್ ಶಾಪ್ ಬಳಿಯಲ್ಲಿ ಕಾರೊಂದನ್ನ ಅಡ್ಡಗಟ್ಟಿ, ಸ್ಕೂಟಿಯಲ್ಲಿ ಬಂದ ಇಬ್ಬರು ಸರಗಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ನಡೆದಿದೆ.

ಡಿಯೋ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಮೂವರು ಪೆಟ್ರೋಲ್ ಬಂಕ್  ಕೇಳುವ ನೆಪ ಮಾಡಿ ಮೊದಲು ಕಾರನ್ನ ಅಡ್ಡಗಟ್ಟಿದ್ದಾರೆ. ಆಗ ಕಿಡಕಿಯಿಂದ ಮಾತನಾಡುತ್ತಿದ್ದ ಹಾಗೇ ಚಿನ್ನದ ಸರವನ್ನ ದೋಚಿ ಪರಾರಿಯಾಗಿದ್ದಾರೆ.  ಅಷ್ಟೇ ಅಲ್ಲ, ಚಾಕುವನ್ನ ತೋರಿಸಿ ಹಣವನ್ನ ಕೇಳಿದ್ದಾರೆ. ತಮ್ಮಲ್ಲಿದ್ದ ಮೂವತ್ತು ರೂಪಾಯಿಗಳನ್ನು ಕಾರಿನಲ್ಲಿದ್ದ ರಾಜು ಶ್ರೀಪತಿರಾವ ಕುಲಕರ್ಣಿಅವರಿಗೆ ಕೊಟ್ಟಿದ್ದಾರೆ.

ಚಿನ್ನದ ಸರವನ್ನ ಎಗರಿಸಿ ಪರಾರಿಯಾಗಿರುವ ಮೂವರು ಶಹರದೊಳಗೆ ಬಂದಿರಬಹುದೆಂದು ಶಂಕಿಸಲಾಗಿದ್ದು, ದ್ವಿಚಕ್ರ ವಾಹನದ ಬಣ್ಣದಿಂದ ಪತ್ತೆ ಹಚ್ಚಲು ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಹಿಂದಿಯಲ್ಲಿ ಮಾತನಾಡುತ್ತಿದ್ದ ಮೂವರು ಯಾರಿಗಾದರೂ ಹೇಳಿದರೇ ಚಾಕು ಹಾಕುವುದಾಗಿ ಬೆದರಿಕೆ ಹಾಕಿದರು. ಹಾಗಾಗಿ ನಾವೂ ಯಾರಿಗೂ ಹೇಳಿಲ್ಲ ಎಂದು ದರೋಡೆಗೆ ಒಳಗಾದ ರಾಜು ಕುಲಕರ್ಣಿ ಕರ್ನಾಟಕವಾಯ್ಸ್.ಕಾಂಗೆ ಮಾಹಿತಿಯನ್ನ ನೀಡಿದರು.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದು, ನಗರದಲ್ಲಿ ನಾಕಾ ಬಂದಿ ಹಾಕಲಾಗಿದೆ.

Leave a Reply

Your email address will not be published. Required fields are marked *