Karnataka Voice

Latest Kannada News

HD ರೇವಣ್ಣರಿಗೆ ಷರತ್ತುಬದ್ಧ ಜಾಮೀನು ಮಂಜೂರು….

ಬೆಂಗಳೂರು: ಮಹಿಳೆಯೋರ್ವಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಜಾಮೀನು ಮಂಜೂರಾಗಿದೆ.

ಜನಪ್ರತಿನಿಧಿ ನ್ಯಾಯಾಲಯದಲ್ಲಿ ಬೆಳಿಗ್ಗೆಯಿಂದ ನಡೆದ ಕಲಾಪದಲ್ಲಿ ಈಗಷ್ಟೇ ಜಾಮೀನು ನೀಡಿ, ನ್ಯಾಯಾಧೀಶರಾದ ಸಂತೋಷ ಗಜಾನನ ಭಟ್ ಅವರು ಆದೇಶ ನೀಡಿದ್ದಾರೆ.

ರೇವಣ್ಣ ಅವರ ಪರವಾಗಿ ಸಿ.ವಿ.ನಾಗೇಶ ಅವರು ವಾದ ಮಂಡಿಸಿದ್ದರು. ಜಾಮೀನು ಸಿಕ್ಕ ನಂತರ ನ್ಯಾಯವಾದಿ ನಾಗೇಶ ಮಾತನಾಡಿ, ಇದು ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಾಗಿತ್ತೆಂದು ಹೇಳಿದರು.

ಇಂದು ಬಿಡುಗಡೆ ಭಾಗ್ಯವಿಲ್ಲ. ನಾಳೆಗೆ ಜೈಲಿಂದ ಬಿಡುಗಡೆ ಆಗಬಹುದು ಎಂದರು.

Leave a Reply

Your email address will not be published. Required fields are marked *