Posts Slider

Karnataka Voice

Latest Kannada News

ಸರಕಾರದ ಗುಲಾಮ ನೌಕರನಾದರೇ, ಆತನ ಕುಟುಂಬ ಅವನಿಗೆ ಗುಲಾಮನಾಗಬೇಕಾ..?- ಮಾಜಿ ಸಿಎಂ ಸಿದ್ಧರಾಮಯ್ಯ

1 min read
Spread the love

ಬೆಂಗಳೂರು: ರಾಜ್ಯ ಸರಕಾರ ಹೊಸದೊಂದು ಕಾನೂನು ಜಾರಿಗೆ ತರಲು ಮುಂದಾಗಿದ್ದು, ಸರ್ಕಾರಿ ನೌಕರರ ಕುಟುಂಬದವರು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದೆಂಬ ನಿಯಮವನ್ನ ತರುತ್ತಿದ್ದು, ಇದಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ಧರಾಮಯ್ಯ, ಈ ನಿಯಮ ಜಾರಿಗೆ ತರಲು ಹೊರಟಿರುವುದು ಮಾನವ ವಿರೋಧಿಯಾಗಿದ್ದು, ಫ್ಯಾಸಿಸ್ಟ್ ರೀತಿಯ ನಡುವಳಿಕೆ ಎಂದು ಖಂಡಿಸಿದ್ದಾರೆ.

ಗಂಡ ಕೊಲೆಗಾರನಾದರೇ ಪತ್ನಿಗೆ, ಕುಟುಂಬಕ್ಕೆ ಶಿಕ್ಷೆ ಕೊಡಲಾಗುತ್ತದೆಯೇ ಎಂದು ಪ್ರಶ್ನಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಸರಕಾರಿ ನೌಕರ ಸರಕಾರದ ಗುಲಾಮ- ಸರಕಾರಿ ನೌಕರರ ಪತ್ನಿ, ಮಕ್ಕಳು, ಅವಲಂಬಿತರು ನೌಕರರ ಗುಲಾಮರು ಎಂದು ನಿರೂಪಿಸಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಯಾವುದೇ ಕಾರಣಕ್ಕೂ ಈ ಅಮಾನವೀಯ ನಿಯಮಗಳನ್ನ ಜಾರಿಗೆ ತರಬಾರದು. ಅಗತ್ಯೆ ಬಿದ್ದರೇ ತಜ್ಞರ ಸಮಿತಿಯನ್ನ ರಚನೆ ಮಾಡಿ, ದೇಶದಲ್ಲಿ ಯಾವ ಯಾವ ಕಾನೂನುಗಳನ್ನ ಅಳವಡಿಸಿಕೊಂಡಿದ್ದಾರೆಂದು ಅಧ್ಯಯನ ಮಾಡಬೇಕೆಂದು ಕೋರಿರುವ ಸಿದ್ಧರಾಮಯ್ಯನವರು, ಆತುರ ಪಡದೇ ಅಧಿವೇಶನದಲ್ಲಿ ಚರ್ಚೆ ನಡೆಸಿ ನಿಯಮಗಳನ್ನ ಅಂತಿಮಗೊಳಿಸಬೇಕೆಂದು ಆಗ್ರಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed