ಸರಕಾರದ ಗುಲಾಮ ನೌಕರನಾದರೇ, ಆತನ ಕುಟುಂಬ ಅವನಿಗೆ ಗುಲಾಮನಾಗಬೇಕಾ..?- ಮಾಜಿ ಸಿಎಂ ಸಿದ್ಧರಾಮಯ್ಯ
1 min readಬೆಂಗಳೂರು: ರಾಜ್ಯ ಸರಕಾರ ಹೊಸದೊಂದು ಕಾನೂನು ಜಾರಿಗೆ ತರಲು ಮುಂದಾಗಿದ್ದು, ಸರ್ಕಾರಿ ನೌಕರರ ಕುಟುಂಬದವರು ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದೆಂಬ ನಿಯಮವನ್ನ ತರುತ್ತಿದ್ದು, ಇದಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ಧರಾಮಯ್ಯ, ಈ ನಿಯಮ ಜಾರಿಗೆ ತರಲು ಹೊರಟಿರುವುದು ಮಾನವ ವಿರೋಧಿಯಾಗಿದ್ದು, ಫ್ಯಾಸಿಸ್ಟ್ ರೀತಿಯ ನಡುವಳಿಕೆ ಎಂದು ಖಂಡಿಸಿದ್ದಾರೆ.
ಗಂಡ ಕೊಲೆಗಾರನಾದರೇ ಪತ್ನಿಗೆ, ಕುಟುಂಬಕ್ಕೆ ಶಿಕ್ಷೆ ಕೊಡಲಾಗುತ್ತದೆಯೇ ಎಂದು ಪ್ರಶ್ನಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಸರಕಾರಿ ನೌಕರ ಸರಕಾರದ ಗುಲಾಮ- ಸರಕಾರಿ ನೌಕರರ ಪತ್ನಿ, ಮಕ್ಕಳು, ಅವಲಂಬಿತರು ನೌಕರರ ಗುಲಾಮರು ಎಂದು ನಿರೂಪಿಸಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಯಾವುದೇ ಕಾರಣಕ್ಕೂ ಈ ಅಮಾನವೀಯ ನಿಯಮಗಳನ್ನ ಜಾರಿಗೆ ತರಬಾರದು. ಅಗತ್ಯೆ ಬಿದ್ದರೇ ತಜ್ಞರ ಸಮಿತಿಯನ್ನ ರಚನೆ ಮಾಡಿ, ದೇಶದಲ್ಲಿ ಯಾವ ಯಾವ ಕಾನೂನುಗಳನ್ನ ಅಳವಡಿಸಿಕೊಂಡಿದ್ದಾರೆಂದು ಅಧ್ಯಯನ ಮಾಡಬೇಕೆಂದು ಕೋರಿರುವ ಸಿದ್ಧರಾಮಯ್ಯನವರು, ಆತುರ ಪಡದೇ ಅಧಿವೇಶನದಲ್ಲಿ ಚರ್ಚೆ ನಡೆಸಿ ನಿಯಮಗಳನ್ನ ಅಂತಿಮಗೊಳಿಸಬೇಕೆಂದು ಆಗ್ರಹಿಸಿದ್ದಾರೆ.