Karnataka Voice

Latest Kannada News

ಹತ್ಯೆಯಾಗಿದ್ದು ಕುಚಿಕು ಗೆಳೆಯರು: ನಾಲ್ವರ ಬಂಧನ- ಟಾರ್ಗೆಟ್ ನಿಯಾಜ್- ಜೊತೆಯಾಗಿದ್ದು ಮಂಜುನಾಥ

ಹುಬ್ಬಳ್ಳಿ: ತನ್ನ ಆತ್ಮೀಯ ಗೆಳೆಯನನ್ನ ಹೊಡೆಯುತ್ತಿದ್ದಾರೆಂದು ತಿಳಿದು ಬಿಡಿಸಲು ಹೋದವನನ್ನೂ ಕೊಲೆಗೆಡುಕರು ಹತ್ಯೆ ಮಾಡಿದ್ದು, ಇದೀಗ ಪೊಲೀಸರ ಬಲೆಗೆ ಸಿಕ್ಕು ಸತ್ಯವನ್ನ ಒಪ್ಪಿಕೊಂಡಿದ್ದಾರೆಂದು ಖಚಿತ ಮೂಲಗಳು ತಿಳಿಸಿವೆ.

ನಿಯಾಜ ಜೋರಮ್ಮನವರ ಎಂಬ ಯುವಕ ತಂದೆ-ತಾಯಿಯಿಲ್ಲದವ. ತನ್ನ ಚಿಕ್ಕಮ್ಮನ ಮನೆಯಲ್ಲೇ ಇರುತ್ತಿದ್ದನಾದರೂ ಉಡಾಳತನಕ್ಕೆ ಹೇಳಿ ಮಾಡಿಸಿದಂತಿದ್ದ. ಇತ್ತೀಚೆಗಷ್ಟೇ ಮಂಜುನಾಥ ಕಬ್ಬಿನ ಕೂಡಾ ಈತನಿಗೆ ಪರಿಚಯವಾಗಿ “ದೋಸ್ತಿ” ನಡೆದಿತ್ತು. ಈಗ ಕೆಲ ದಿನಗಳ ಹಿಂದಷ್ಟೇ ಮಂಜುನಾಥ ಕಬ್ಬನಿಗೂ ಕೆಲವರು ಹೊಡೆದು ಗಾಯಗೊಳಿಸಿದ್ದರು.

ಉಡಾಳತನದಿಂದ ಪದೇ ಪದೇ ಜಗಳವಾಗುತ್ತಿದ್ದ ಕಾರಣ ಪೇಂಟರ್ ಶ್ರೀನಿವಾಸ, ಈತನಿಗೆ ಗತಿ ಕಾಣಿಸಲೇಬೇಕೆಂದು ನಿನ್ನೆ ನಿಯಾಜನನ್ನ ಹುಡುಕುತ್ತಿದ್ದ ಗೋಪನಕೊಪ್ಪದ ಚಹಾ ಅಂಗಡಿಯಲ್ಲಿ ಸಿಕ್ಕಿದ್ದೆ ತಡ ಆತನ ಮೇಲೆ ಹಲ್ಲೆ ಮಾಡಲು ಮುಂದಾದ. ಇದನ್ನ ಕೇಳಿ ಬಿಡಿಸಲು ಓಡಿ ಮನೆಯಿಂದ ಮಂಜುನಾಥನಿಗೂ ಶ್ರೀನಿವಾಸನ ಜೊತೆಗಾರರು ಹಲ್ಲೆ ಮಾಡಿ, ಸ್ಥಳದಲ್ಲಿಯೇ ಸಾಯುವಂತೆ ಮಾಡಿದ್ದಾರೆ.

ಗೆಳೆತನ ನಿಭಾಯಿಸಲು ಹೋಗಿ ಮಂಜುನಾಥ ಕೂಡ ಹೆಣವಾಗಿದ್ದು, ಆತನ ತಂದೆಯೂ ಅನಾರೋಗ್ಯದಿಂದ ಬಳಲುತ್ತಿದ್ದು ಮನೆಗೆ ಆಧಾರವೇ ಇಲ್ಲವಾಗಿದೆ. ಎರಡು ಮನೆಯಲ್ಲಿ ಕಣ್ಣೀರಿನ ಕೋಡಿ ಹರಿಯುತ್ತಿದ್ದು, ಕೊಲೆ ಮಾಡಿದ ಶ್ರೀನಿವಾಸನ ಪಡೆ ಜೈಲೂಟ ತಿನ್ನಲು ರೆಡಿಯಾಗುತ್ತಿದ್ದಾರೆ.

ಕೊಲೆ ಮಾಡಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಪೊಲೀಸರಿಗೂ ಸಿಕ್ಕಿಬಿದ್ದಿದ್ದು ಆಗಿದೆ.

Leave a Reply

Your email address will not be published. Required fields are marked *