Karnataka Voice

Latest Kannada News

ಎಗ್‌ ರೈಸ್ ಗೂ ತಲ್ವಾರ ತಂದ “ಎಂಓಬಿ”- ಲೇಡಿ ಸಿಂಗಂ ಮಾಡಿದ್ದೇನು….!

ಹಾವೇರಿ: ತಿಂದ ಎಗ್ ರೈಸ್ ಗೆ ಹಣ ಕೊಡಲು ಆಗದ ‘ಪೋಕರಿ ಎಂಓಬಿ’ಯೊಬ್ಬ ತಲ್ವಾರ ತಂದು ಹಲ್ಲೆಗೆ ಮುಂದಾದ ಸಮಯದಲ್ಲಿಯೇ ಲೇಡಿ ಸಿಂಗಂ ಇನ್ಸಪೆಕ್ಟರ್ ಎಂಟ್ರಿ ಕೊಟ್ಟು, ಹೆಡಮುರಿಗೆ ಕಟ್ಟಿದ ಪ್ರಕರಣ ನಡೆದಿದೆ.

ಎಕ್ಸಕ್ಲೂಸಿವ್ ವೀಡಿಯೋ

https://youtu.be/2naYKOYvvkQ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದ ಮೆಡ್ಲೇರಿ ರಸ್ತೆಯಲ್ಲಿರೋ ಬಾರೊಂದರ ಬಳಿಯ ಎಗ್ ರೈಸ್ ಮಾಲೀಕನಿಗೆ ತಲ್ವಾರ ತಂದು ಬೆದರಿಸುತ್ತಿದ್ದ ಫಕ್ಕಿರೇಶ ಎಂಬಾತನನ್ನ, ಲೇಡಿ ಸಿಂಗಂ ರಾಣೆಬೆನ್ನೂರ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಭಾಗ್ಯವತಿ ಅವರು ಒದ್ದು ತೆಗೆದುಕೊಂಡು ಹೋಗಿದ್ದಾರೆ.
ಎಂಓಬಿ ಫಕ್ಕೀರೇಶ ವ್ಯಾಪಾರಸ್ಥರನ್ನ ಬೆದರಿಸುತ್ತಲೇ ಹಣವನ್ನ ಪಡೆಯುತ್ತಿದ್ದ. ಇದೇ ಕಾರಣದಿಂದ ಹಲವರು ದೂರನ್ನ ನೀಡಿದ್ದರು.

Leave a Reply

Your email address will not be published. Required fields are marked *