Posts Slider

Karnataka Voice

Latest Kannada News

ಧಾರವಾಡ ಪ್ರಭಾರಿ DDPI ಆಗಿ ಉಮೇಶ ಬೊಮ್ಮಕ್ಕನವರ ಅಧಿಕಾರ ಸ್ವೀಕಾರ: ಬದಲಾವಣೆಯ ಹೊಸ ಗಾಳಿ ಸಾಧ್ಯತೆ…!!!

Spread the love

ಧಾರವಾಡ: ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾಗಿ ಹುಬ್ಬಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿರುವ ಉಮೇಶ ಬೊಮ್ಮಕ್ಕನವರ ಅಧಿಕಾರ ಸ್ವೀಕರಿಸಿದರು.

ಧಾರವಾಡ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮಯದಲ್ಲಿ ತಮ್ಮದೇ ಆದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಉಮೇಶ ಬೊಮ್ಮಕ್ಕನವರ ಅವರು, ಧಾರವಾಡ ಜಿಲ್ಲೆಯಲ್ಲಿ ಹುಬ್ಬಳ್ಳಿ ತಾಲೂಕನ್ನ ಮೊದಲ ಸ್ಥಾನದಲ್ಲಿರಿಸಿದ್ದರು.

ಉಮೇಶ ಬೊಮ್ಮಕ್ಕನವರ ಅವರು ಕ್ರಿಯಾಶೀಲ ಅಧಿಕಾರಿಯಾಗಿದ್ದು, ಹುಬ್ಬಳ್ಳಿ ಗ್ರಾಮೀಣದ ಜೊತೆಗೆ ನವಲಗುಂದ ಬಿಇಓ ಆಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಉಮೇಶ ಬೊಮ್ಮಕ್ಕನವರ ಅವರು ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆಯ ವ್ಯವಸ್ಥೆಯನ್ನ ಪ್ರಭಾರಿಯಿದ್ದಾಗಲೇ ಸುಧಾರಿಸುವ ಸಾಧ್ಯತೆಯಿದೆ ಎಂದು ಅವರನ್ನ ಬಲ್ಲವರು ಹೇಳುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *