Karnataka Voice

Latest Kannada News

ಧಾರವಾಡದಲ್ಲಿ ಗೋ ಕಳ್ಳರು: ಕಾರಲ್ಲಿ ಬರ್ತಾರೆ, ಕಾರಲ್ಲಿ ಒಯ್ತಾರೆ…! ಎಕ್ಸಿಕ್ಸೂಸಿವ್ ವೀಡಿಯೋ.

ಧಾರವಾಡ: ಗೋವುಗಳನ್ನ ಕಳ್ಳತನ ಮಾಡಲಾಗುತ್ತಿದೆ ಎಂದು ವಿಶ್ವಹಿಂದು ಪರಿಷದ್, ಭಜರಂಗ ದಳ ಮನವಿ ಮಾಡಿಕೊಂಡ ಬೆನ್ನಲ್ಲೆ ಗೋವುಗಳನ್ನ ಕಳ್ಳತನ ನಡೆಯುತ್ತಿರುವುದು ಹೇಗೆ ಎಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೋ ವೈರಲ್ ಆಗಿದೆ.

ಧಾರವಾಡದ ಕೆಲಗೇರಿಯಲ್ಲಿ ಗೋವುಗಳನ್ನ ಕಳ್ಳತನ ಮಾಡಿಕೊಂಡು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಾರಿನ ಡಿಕ್ಕಿಯಲ್ಲಿ ಗೋವುಗಳನ್ನ ಕದ್ದುಕೊಂಡು ಹೋಗಲಾಗುತ್ತಿದೆ. ಹೇಗೆ ಗೋವುಗಳನ್ನ ಹಾಕಿಕೊಂಡು ಹೋಗಲಾಗುತ್ತಿದೆ ಎನ್ನುವುದು ಕಂಡು ಬರುತ್ತಿದೆ.

ಧಾರವಾಡದ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಲಗೇರಿ ಗ್ರಾಮದಲ್ಲಿ ನಡೆದ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಕೂಡಾ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳು ವೈರಲ್ ಆಗಿರುವುದರಿಂದ ಪೊಲೀಸರು, ಆರೋಪಿಗಳನ್ನ ಪತ್ತೆ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *