Karnataka Voice

Latest Kannada News

ಧಾರವಾಡದಲ್ಲಿ ಕಳ್ಳರ ಚಲನವಲನ…!

ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ದಿನೇ ದಿನೇ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಹಲವು ರೀತಿಯ ಕುರುಹುಗಳು ಸಿಗುತ್ತಿದ್ದು, ಕಳ್ಳರು ಮಾತ್ರ ಸಿಗದೇ ಜನರ ನೆಮ್ಮದಿಯನ್ನ ಹಾಳು ಮಾಡುತ್ತಿದ್ದಾರೆ.

ಕಳೆದ ವಾರ ಕೋಳಿಕೇರಿಯಲ್ಲಿ ಮೂರು ಮನೆಗಳನ್ನ ಕಳ್ಳತನ ಮಾಡಿದ ನಂತರ ಧಾರವಾಡದ ಮಣಿಕಂಠನಗರದಲ್ಲಿಯೂ ಕಳ್ಳತನ ನಡೆದಿತ್ತು. ಅಷ್ಟೇ ಅಲ್ಲ, ಮದಿಹಾಳದ ಸಿದ್ಧರಾಮಯ್ಯ ಕಾಲನಿಯಲ್ಲಿ ಕಳ್ಳರು ತಿರುಗಾಡಿದ್ದ ಸಿಸಿಟಿವಿ ದೃಶ್ಯಗಳು ಬಹಿರಂಗವಾಗಿದ್ದವು.

ಇದೀಗ ಮತ್ತೊಂದು ಸಿಸಿಟಿವಿ ದೃಶ್ಯ ಬಹಿರಂಗಗೊಂಡಿದ್ದು, ಕಳ್ಳನೋರ್ವ ಮನೆಯೊಳಗೆ ಹೋಗುವ ಮಾರ್ಗವನ್ನ ಹುಡುಕುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ತಲೆಗೆ ಟೊಪ್ಪಿಗೆ ಹಾಕಿಕೊಂಡಿರುವ ಯುವಕ, ಕಳ್ಳತನಕ್ಕೆ ಪ್ರಯತ್ನ ಮಾಡುವ ದೃಶ್ಯವಿದೆ.

ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಜನ್ನತನಗರದಲ್ಲಿ ನಡೆದಿರುವ ಪ್ರಕರಣವಿದ್ದಾಗಿದ್ದು, ಪೊಲೀಸರು ಕಳ್ಳರ ಪತ್ತೆಗಾಗಿ ಜಾಲ ಬೀಸಬೇಕಾಗಿದೆ.

Leave a Reply

Your email address will not be published. Required fields are marked *