Karnataka Voice

Latest Kannada News

ಧಾರವಾಡ: ಉದ್ಯಮಿಯ ಗಮನ ಬೇರೆಡೆ ಸೆಳೆದು ಕಾರಿನ ಗಾಜು ಒಡೆದು 5ಲಕ್ಷ ರೂ.ಲೂಟಿ…!!!

ಧಾರವಾಡ: ಬ್ಯಾಂಕಿನಿಂದ ಹಣ ತೆಗೆದುಕೊಂಡ ಉದ್ಯಮಿಯನ್ನ ಫಾಲೋ ಮಾಡಿರುವ ದುಷ್ಕರ್ಮಿಗಳು ಸಿಬಿಟಿ ಬಳಿ ಕಾರಿನ ಗಾಜು ಒಡೆದು ಐದು ಲಕ್ಷ ರೂಪಾಯಿ ಲೂಟಿ ಮಾಡಿರುವ ಪ್ರಕರಣ ನಡೆದಿದೆ.

ಟ್ರಾನ್ಸ್‌ಪೋರ್ಟ್‌ ಉದ್ಯಮಿಯಾಗಿರುವ ಆಬೀದ ನಾಲ್ವತವಾಡ ಎಂಬುವವರನ್ನೇ ಯಾಮಾರಿಸಿರುವ ದುಷ್ಕರ್ಮಿಗಳು, ಸುಮಾರು ಹೊತ್ತಿನವರೆಗೆ ಫಾಲೋ ಮಾಡಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಶಹರ ಠಾಣೆಯ ಪೊಲೀಸರು, ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

ನಿನ್ನೆಯಷ್ಟೇ ಇಂತಹ ಪ್ರಕರಣಗಳು ಬೈಲಹೊಂಗಲ, ಸವದತ್ತಿ ಮತ್ತು ಹರಿಹರದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ಆರೋಪಿಗಳು ಬೇರೆ ರಾಜ್ಯದವರೆಂದು ಪೊಲೀಸರು ಊಹಿಸಿದ್ದಾರೆ.

ಸಾರ್ವಜನಿಕರು ಕೂಡಾ, ಬ್ಯಾಂಕಿನಿಂದ ಹಣವನ್ನ ತೆಗೆದುಕೊಂಡು ಹೋಗುವಾಗ ಅಪರಿಚಿತರು ಏನೇ ಹೇಳಿದರೂ ಎಚ್ಚರಿಕೆಯಿಂದ ನಡೆದುಕೊಳ್ಳುವುದು ಅವಶ್ಯಕವಾಗಿದೆ.

Leave a Reply

Your email address will not be published. Required fields are marked *