Category: ಹುಬ್ಬಳ್ಳಿ- ಧಾರವಾಡ

  • ಮುಕಳೆಪ್ಪನಿಗೆ ಅಜ್ಮೀರಗೆ ಹೋಗಲು “ದುನಿಯಾ ವಿಜಿ” ಸಲಹೆ… “ಖಾಜಾ ಭೇಟಿ”…

    ಮುಕಳೆಪ್ಪನಿಗೆ ಅಜ್ಮೀರಗೆ ಹೋಗಲು “ದುನಿಯಾ ವಿಜಿ” ಸಲಹೆ… “ಖಾಜಾ ಭೇಟಿ”…

    ಉತ್ತರಕರ್ನಾಟಕದ ಕಾಮೆಡಿಯನ್ ಮುಕಳೆಪ್ಪನಿಗೆ ಭೇಟಿಯಾದ ದುನಿಯಾ ವಿಜಯ

    ಬೆಂಗಳೂರು: ಚಿತ್ರನಟ, ನಿರ್ದೇಶಕ ವಿಜಯಕುಮಾರ ಅವರು ಮುಕಳೆಪ್ಪ ಹೆಸರಿನಲ್ಲಿ ಖ್ಯಾತಿ ಗಳಿಸಿರುವ ಖಾಜಾನನ್ನ ಭೇಟಿ ಮಾಡಿ, ಕೆಲ ಸಮಯ ಕಳೆದರು.

    ವೀಡಿಯೋ ಇಲ್ಲಿದೆ ನೋಡಿ…

    ಚಿತ್ರನಟನೊಂದಿಗೆ ಸಮಯ ಕಳೆಯುತ್ತಿದ್ದ ಮುಕಳೆಪ್ಪನಿಗೆ ಮುತ್ತು ಕೊಟ್ಟ ದುನಿಯಾ ವಿಜಯ, ಅಜ್ಮೀರ್‌ಗೆ ಹೋಗಲು ಸಲಹೆ ನೀಡಿದರು.

  • ಬಸ್‌ನಲ್ಲಿ ಬ್ಯಾಗ್ ಕದಿಯುತ್ತಿದ್ದ “ಛಬ್ಬಿಯ ಮಹಾದೇವಿ” ಬಂಧಿಸಿದ ಇನ್ಸಪೆಕ್ಟರ್ ಸುರೇಶ ಯಳ್ಳೂರ ಟೀಂ…

    ಬಸ್‌ನಲ್ಲಿ ಬ್ಯಾಗ್ ಕದಿಯುತ್ತಿದ್ದ “ಛಬ್ಬಿಯ ಮಹಾದೇವಿ” ಬಂಧಿಸಿದ ಇನ್ಸಪೆಕ್ಟರ್ ಸುರೇಶ ಯಳ್ಳೂರ ಟೀಂ…

    ಬಸ್‌ನಲ್ಲಿ ಬ್ಯಾಗ್ ಕದ್ದಿದ್ದ ಕಳ್ಳಿಯ ಬಂಧನ: ಚಿನ್ನಾಭರಣ, ನಗದು ವಶ

    ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿರಸಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರ‌ ಬ್ಯಾಗ್ ಕಳ್ಳತನವಾಗಿದ್ದರ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಕಳ್ಳತನದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ S H ಯಳ್ಳೂರರವರ ನೇತೃತ್ವದ ಸಿಬ್ಬಂದಿ ಜನರ ತಂಡವನ್ನು ರಚಿಸಲಾಗಿತ್ತು,


    ತಂಡವು ಕಳ್ಳತನ ಮಾಡಿದ್ದ ಓರ್ವ ಮಹಿಳಾ  ಆರೋಪಿ ಮಹಾದೇವಿ ವಡ್ಡರಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತಳಿಂದ ಕಳ್ಳತನವಾಗಿದ್ದ 2 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 7000/- ರೂ ನಗದು, ಮೊಬೈಲ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿತಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.

    ಪ್ರಕರಣದ ಬೇಧಿಸುವಲ್ಲಿ ಯಶಸ್ವಿಯಾದ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿರುತ್ತಾರೆ.

  • ಹುಬ್ಬಳ್ಳಿ- “ಘನಘೋರ ಪೊಲೀಸ್ ಸಸ್ಪೆಂಡ್” Big Impact….

    ಹುಬ್ಬಳ್ಳಿ- “ಘನಘೋರ ಪೊಲೀಸ್ ಸಸ್ಪೆಂಡ್” Big Impact….

    ಹುಬ್ಬಳ್ಳಿ: ಬಂಡಿವಾಡ ಗ್ರಾಮದ ಬಳಿಯ ಪ್ರೀತಿ ಡಾಬಾದಲ್ಲಿ ಗ್ರಾಪಂ ಸದಸ್ಯರು ಆಗಿರುವ ಡಾಬಾದ ಮಾಲೀಕನನ್ನ ಮನಬಂದಂತೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್‌ನನ್ನ ಕಮೀಷನರ್ ಎನ್.ಶಶಿಕುಮಾರ್ ಅವರು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

    ಘಟನೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಕರ್ನಾಟಕವಾಯ್ಸ್. ಕಾಂ ಹೊರ ಹಾಕಿತ್ತು.

    ಬಂಡಿವಾಡ ಗ್ರಾಮದ ಹನಮಂತ ಎಂಬುವವರನ್ನ ಅದೇ ಗ್ರಾಮದ ಪೊಲೀಸ್ ವಿರುಪಾಕ್ಷ ಅಳಗವಾಡಿ, ಥಳಿಸಿದ್ದ. ಈ ವೀಡಿಯೋ ವೈರಲ್ ಆಗಿತ್ತು. ಈ ವರ್ತನೆಯನ್ನ ಇಲಾಖೆ ಸಹಿಸದೇ ಅಮಾನತ್ತು ಮಾಡಿದ್ದಾರೆಂದು ಗೊತ್ತಾಗಿದೆ.

  • ಹುಬ್ಬಳ್ಳಿಯ ಪೊಲೀಸ್‌ನಿಂದ “ಗ್ರಾಪಂ” ಸದಸ್ಯನಿಗೆ ಹಿಗ್ಗಾ-ಮುಗ್ಗಾ ಥಳಿತ Big Exclusive with Video..

    ಹುಬ್ಬಳ್ಳಿಯ ಪೊಲೀಸ್‌ನಿಂದ “ಗ್ರಾಪಂ” ಸದಸ್ಯನಿಗೆ ಹಿಗ್ಗಾ-ಮುಗ್ಗಾ ಥಳಿತ Big Exclusive with Video..

    ಹುಬ್ಬಳ್ಳಿ: ಗ್ರಾಮ ಪಂಚಾಯತಿ ಸದಸ್ಯನನ್ನ ಅವನದ್ದೆ ಡಾಬಾದಲ್ಲಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿಯ ಪ್ರೀತಿ ಡಾಬಾದಲ್ಲಿ ಸಂಭವಿಸಿದೆ.

    ಡಾಬಾದ ಮಾಲೀಕ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹನಮಂತ ಹುಚ್ಚಣ್ಣನವರ ಎಂಬುವವರನ್ನೇ ಬೆಂಡಿಗೇರಿ ಪೊಲೀಸ್ ಠಾಣೆಯ ವಿರುಪಾಕ್ಷಿ ಅಳಗವಾಡಿಎಂಬ ಪೊಲೀಸ್ ಮನಬಂದಂತೆ ಥಳಿಸಲಾಗಿದೆ.

    ಘಟನೆಯ ಬಗ್ಗೆ ಥಳಿತಕ್ಕೊಳಗಾದ ಹನಮಂತ ಕರ್ನಾಟಕವಾಯ್ಸ್.ಕಾಂಗೆ ಮಾಹಿತಿ ನೀಡಿದ್ದಾರೆ.

    ಪೊಲೀಸ್ ಹನಮಂತ ಅಳಗವಾಡಿ ಬಂಡಿವಾಡ ಗ್ರಾಮದವನಾಗಿದ್ದು, ಡಾಬಾದಲ್ಲಿ ಮೊದಲು ಕ್ಲೀನರ್‌ನ್ನ ಹೊಡೆದು ನಂತರ ಮಾಲೀಕನನ್ನೂ ಥಳಿಸಿದ್ದಾರೆಂದು ಮಾಲೀಕ ವಿವರಿಸಿದ್ದಾರೆ.

     

  • ಹುಬ್ಬಳ್ಳಿಯ “ಆತನಿಂದ” ಘನಘೋರ ಕೃತ್ಯ… Exclusive

    ಹುಬ್ಬಳ್ಳಿಯ “ಆತನಿಂದ” ಘನಘೋರ ಕೃತ್ಯ… Exclusive

    ಹುಬ್ಬಳ್ಳಿ: ಯಾವುದೇ ರೀತಿಯ ಮನುಷ್ಯ ತನ್ನ ಅಧಿಕಾರದ ದರ್ಪವನ್ನ ಇಷ್ಟೊಂದು ಕ್ರೂರವಾಗಿ ಉಪಯೋಗ ಮಾಡಿಕೊಳ್ಳುವುದು ಬಹುತೇಕ ಈ ಭಾಗದಲ್ಲಿ ಇದೇ ಮೊದಲಿರಬೇಕು.

    ತನ್ನ ಕೆಲಸವೇನು, ತನಗೆ ಸಮಾಜ ಯಾವ ಗೌರವ ಕೊಡುತ್ತಿದೆ. ಆ ಗೌರವಕ್ಕೂ ಹಣ ಪಡೆದುಕೊಳ್ಳುವ ಮನಸ್ಥಿತಿ ಬಂದು, ಅದು ಅಸುರರ ಥರ ನಡೆದುಕೊಳ್ಳುವುದಕ್ಕೆ ಕಾರಣವಾಗಿದೆ. ಇದನ್ನ ನೋಡಿದ ಮೇಲೆ “ಆ ಇಲಾಖೆ”ಯ ಬಗ್ಗೆ ನೂರೆಂಟು ಮಾತು ಬರಲೂಬಹುದು.

    ಓರ್ವ ನಡೆದುಕೊಂಡ ರೀತಿಯ ವೀಡಿಯೋ ವೈರಲ್ ಆಗಿದೆ. ಆ ವೀಡಿಯೋದಲ್ಲಿ ನಡೆದ ದೃಶ್ಯಾವಳಿಗಳು ನೋಡುಗರಲ್ಲಿ ಅಸಹನೆ ಮೂಡಿಸದೇ ಇರದು. ಇಂತಹ ಹೀನ ಕೃತ್ಯದ ಪೂರ್ಣವಾದ ವಿವರವನ್ನ ಕರ್ನಾಟಕವಾಯ್ಸ್.ಕಾಂ ನಾಳೆ ಹೊರಹಾಕಲಿದೆ.

  • ನಾಳೆ ಮಿಶ್ರಿಕೋಟಿ ಬಂದ್- ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಬೀದಿಗಿಳಿಯಲು ನಿರ್ಧಾರ…!!!

    ನಾಳೆ ಮಿಶ್ರಿಕೋಟಿ ಬಂದ್- ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಬೀದಿಗಿಳಿಯಲು ನಿರ್ಧಾರ…!!!

    ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಕಲಘಟಗಿ ಕ್ಷೇತ್ರದ ಮಿಶ್ರಿಕೋಟಿಯನ್ನ ಬಂದ್ ಮಾಡಿ, ಪ್ರತಿಭಟನೆ ನಡೆಸಲು ಸ್ಥಳೀಯರು ನಿರ್ಧರಿಸಿದ್ದಾರೆ.

    ಮಿಶ್ರಿಕೋಟಿಯ ಪ್ಯಾಟಿ ಬಸವೇಶ್ವರ ದೇವಸ್ಥಾನದಿಂದ ಹುಬ್ಬಳ್ಳಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಬಗ್ಗೆ ಸಂಬಂಧಿಸಿದಂತೆ ಹೇಳಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬಂದ್ ಮಾಡಲು ನಿರ್ಧರಿಸಲಾಗಿದೆ.

    ಬಂದ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು, ಶಾಲೆ-ಕಾಲೇಜು ಹಾಗೂ ಸಾರಿಗೆಯನ್ನ ಸಂಪೂರ್ಣ ಬಂದ್ ಮಾಡಿ ಹೋರಾಟ ನಡೆಸಲಾಗುತ್ತಿದೆ.

  • ಸುವರ್ಣಸೌಧದ ಬಳಿ ಅಪಘಾತ- ಹುಬ್ಬಳ್ಳಿಯ ಗಿರೀಶ ಕುಲಕರ್ಣಿ ದುರ್ಮರಣ…!!!

    ಸುವರ್ಣಸೌಧದ ಬಳಿ ಅಪಘಾತ- ಹುಬ್ಬಳ್ಳಿಯ ಗಿರೀಶ ಕುಲಕರ್ಣಿ ದುರ್ಮರಣ…!!!

    ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಕಬ್ಬು ತುಂಬಿದ ಟ್ರ್ಯಾಕ್ಟರ್ ಏಕಾಏಕಿ ಪಲ್ಟಿಯಾಗಿ, ಯುವಕ ಸಾವನ್ನಪ್ಪಿರುವ ಘಟನೆ ಸುವರ್ಣಸೌಧದ ಬಳಿ ನಡೆದಿದೆ.

    ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಕಬ್ಬು ಓವರ್ ಲೋಡ್ ನಿಂದಾಗಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಮೃತ ಯುವಕನನ್ನು ಹುಬ್ಬಳ್ಳಿ ಮೂಲದ 24 ವರ್ಷದ ಗಿರೀಶ್ ಕುಲಕರ್ಣಿ ಎಂದು ಗುರುತಿಸಲಾಗಿದೆ. ಪ್ರಥಮ್ ಹಾಗೂ ಇನ್ನೋರ್ವ ಗಿರೀಶ್ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರು ಸ್ನೇಹಿತರು ಹುಟ್ಟುಹಬ್ಬ ಆಚರಣೆ ಮುಗಿಸಿ ಕಾರಿನಲ್ಲಿ ಹುಬ್ಬಳ್ಳಿಗೆ ವಾಪಾಸ್ ಆಗುತ್ತಿದ್ದರು. ಈ ವೇಳೆ ಈ ಅಪಘಾತ ಸಂಭವಿಸಿದೆ.

    ಹಿರೇಬಾಗೇವಾಡಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

  • ಹುಬ್ಬಳ್ಳಿ: ನಸೆಯಲ್ಲಿ ಬಡಿದಾಡಿಕೊಂಡ “ತಂದೆ-ಮಗ” ಕಿಮ್ಸನಲ್ಲಿ ಪ್ರಾಣಬಿಟ್ಟ ‘ಜನಕ’- ಪುತ್ರನ ವಿರುದ್ಧ ‘ಜನನಿ’ ಕಂಪ್ಲೇಂಟ್ Big Exclusive

    ಹುಬ್ಬಳ್ಳಿ: ನಸೆಯಲ್ಲಿ ಬಡಿದಾಡಿಕೊಂಡ “ತಂದೆ-ಮಗ” ಕಿಮ್ಸನಲ್ಲಿ ಪ್ರಾಣಬಿಟ್ಟ ‘ಜನಕ’- ಪುತ್ರನ ವಿರುದ್ಧ ‘ಜನನಿ’ ಕಂಪ್ಲೇಂಟ್ Big Exclusive

    ಆಸ್ತಿಗಾಗಿ ಅಪ್ಪನನ್ನೇ ಕೊಲೆ ಮಾಡಿದ ಮಗ ಅಣ್ಣಪ್ಪ ಮಗನ ವಿರುದ್ದ ತಾಯಿ ದೂರು

    ಹುಬ್ಬಳ್ಳಿ: ಆಸ್ತಿ ವಿಚಾರಕ್ಕೇ ತಂದೆ ಮಗ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಚಿಕಿತ್ಸೆ ಫಲಕಾರಿಯಾಗದೇ  ಸಾವನಪ್ಪಿದ್ದು, ಮಗ ಹೆಂಡತಿಯನ್ನು ಕರೆದುಕೊಂಡು ಊರು ಬಿಟ್ಟು ಹೋಗಿದ್ದಾನೆ. ತಂದೆಯನ್ನು ಕೊಲೆ ಮಾಡಿದ ಮಗನ ವಿರುದ್ಧ ತಾಯಿಯೇ ಕೊಲೆ ಪ್ರಕರಣ ದಾಖಲು ಮಾಡಿದ ಘಟನೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನ 77 ವರ್ಷದ ನಾಗರಾಜ ಚಂದ್ರಶೇಖರ್ ಆಗಿದ್ದು, ಮಗ ಅಣ್ಣಪ್ಪ ಕೊಲೆ ಮಾಡಿದ್ದಾನೆ. ಕಳೆದ ನವೆಂಬರ್ 19 ರಂದು ಮನೆಯಲ್ಲಿ ಆಸ್ತಿ ವಿಚಾರಕ್ಕೇ ತಂದೆ ಹಾಗೂ ಮಗನ ನಡುವೆ ಜಗಳ ಆರಂಭವಾಗಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಇಬ್ಬರು ನಶೆಯಲ್ಲಿದ್ದ ಕಾರಣ ಅಣ್ಣಪ್ಪ ತಂದೆಯ ಮೇಲೆ ಹಲ್ಲೆ ಮಾಡಿದ ಪರಿಣಾಮ ನಾಗರಾಜ ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ. ಮಗ ತನ್ನ ಹೆಂಡತಿಯನ್ನು ಕರೆದುಕೊಂಡು ಊರು ಬಿಟ್ಟಿದ್ದ.

    Exclusive Video…

    ಆದ್ರೆ ನಾಗರಾಜನಿಗೆ ಮಗ ಹೊಡೆದ ಒಳ ಏಟಿನಿಂದ ರವಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೆ ಕಮಿಷನರ್ ಎನ್ ಶಶಿಕುಮಾರ್ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಶವ ಪರಿಶೀಲನೆ ನಡೆಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

  • ಶಿಗ್ಗಾಂವ್ ಗೆಲುವು- “ವಾರ್ ರೂಂ” ರೂವಾರಿ “ಮೋಹನ ಅಸುಂಡಿ” ಕಾರ್ಯಕ್ಷಮತೆ…!!!

    ಶಿಗ್ಗಾಂವ್ ಗೆಲುವು- “ವಾರ್ ರೂಂ” ರೂವಾರಿ “ಮೋಹನ ಅಸುಂಡಿ” ಕಾರ್ಯಕ್ಷಮತೆ…!!!

    ಹುಬ್ಬಳ್ಳಿ: ಕಳೆದ ಮೂವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆಯನ್ನ ಕಾಣದ ಶಿಗ್ಗಾಂವ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಎಲೆಮರೆ ಕಾಯಿಯಂತೆ ಕೆಲಸ ಮಾಡಿದ್ದು, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನ ಅಸುಂಡಿಯವರು ಎಂಬುದು ಬಹುತೇಕರಿಗೆ ಗೊತ್ತಿಲ್ಲ.

    ಹೌದು… ಚುನಾವಣೆಯ ರೂಪುರೇಷೆ ರಚಿಸುವ ಜೊತೆಗೆ ಯಾವ ಯಾವ ನಾಯಕರು ಯಾವ ಭಾಗದಲ್ಲಿ ಪ್ರಚಾರ ಮಾಡಿದರೇ, ಅನುಕೂಲವಾಗತ್ತೆ ಎಂದು ನಿರ್ಧಾರ ಮಾಡಿ, ಅವರೆಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡುವುದು ವಾರ್ ರೂಂನ ಕರ್ತವ್ಯ. ಆ ಕರ್ತವ್ಯವನ್ನ ನಿಷ್ಠೆಯಿಂದ ನಿಭಾಯಿಸಿದ್ದು, ಮೋಹನ ಅಸುಂಡಿಯವರು.

    ಹಾನಗಲ್, ಕುಂದಗೋಳ ಉಪಚುನಾವಣೆಯ ಸಮಯದಲ್ಲಿ ಇವರದ್ದೆ ಸಾರಥ್ಯವಿರುತ್ತಿತ್ತು. ಈಗ ಶಿಗ್ಗಾಂವ ಕ್ಷೇತ್ರದಲ್ಲಿ ಇವರ ಕಾರ್ಯ ರಾಜ್ಯದ ನಾಯಕರ ಮನಸ್ಸನ್ನ ಗೆದ್ದಿದೆ.

    ಮೋಹನ ಅಸುಂಡಿಯವರ ಕಾರ್ಯವನ್ನ ಮೆಚ್ಚಿ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ  ಸಚಿವ ಸತೀಶ ಜಾರಕಿಹೊಳಿಯವರು ಖುದ್ದು ಮಾತಾಡಿ, ಅಭಿನಂದನೆ ಸಲ್ಲಿಸಿರುವುದು, ಮೋಹನ ಅಸುಂಡಿಯವರ ಪಕ್ಷದ ನಿಷ್ಠೆಯನ್ನ ತೋರಿಸುತ್ತಿದೆ.

  • “ಎಕ್ಸಟ್ರಾ ಕ್ಲಾಸ್ ಎಫೆಕ್ಟ್” ಕಾರೇರಿದ ‘4’ ವಿದ್ಯಾರ್ಥಿಗಳ ಸ್ಥಿತಿ ಗಂಭೀರ- ನವಲಗುಂದ ಚಿಲಕವಾಡದ ಬಳಿ ಕಾರು ಪಲ್ಟಿ…!!!

    “ಎಕ್ಸಟ್ರಾ ಕ್ಲಾಸ್ ಎಫೆಕ್ಟ್” ಕಾರೇರಿದ ‘4’ ವಿದ್ಯಾರ್ಥಿಗಳ ಸ್ಥಿತಿ ಗಂಭೀರ- ನವಲಗುಂದ ಚಿಲಕವಾಡದ ಬಳಿ ಕಾರು ಪಲ್ಟಿ…!!!

    ನವಲಗುಂದ: ಹೆಚ್ಚುವರಿ ತರಗತಿಗಳಿಗೆ ಹಾಜರಾಗಿ ಮರಳಿ ಹೋಗಲು ಕಾರಿಗೆ ಹತ್ತಿದ ವಿದ್ಯಾರ್ಥಿಗಳು, ಕಾರು ಪಲ್ಟಿಯಾದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನವಲಗುಂದ ತಾಲೂಕಿನ ಚಿಲಕವಾಡದ ಬಳಿ ಸಂಭವಿಸಿದೆ.

    ಚಿಲಕವಾಡ ಸರಕಾರಿ ಪ್ರೌಢಶಾಲೆಯಲ್ಲಿ ರವಿವಾರವಾದರೂ ಹೆಚ್ಚುವರಿ ತರಗತಿಗಳು ನಡೆಸಲಾಗಿತ್ತು. ಕ್ಲಾಸ್ ಮುಗಿದ ನಂತರ ವಿದ್ಯಾರ್ಥಿಗಳು ಬಸ್ ನಿಲ್ದಾಣದ ಬಳಿ ನಿಂತಾಗ, ನವಲಗುಂದದಿಂದ ನಾಗರಳ್ಳಿಯತ್ತ ಹೊರಟಿದ್ದ ಕಾರಿಗೆ ‘ಕೈ’ ಮಾಡಿ ಲಿಫ್ಟ್ ಕೇಳಿದ್ದಾರೆ.

    ಆರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹತ್ತಿಸಿಕೊಂಡ ಕಾರು ಕೆಲವೇ ನಿಮಿಷಗಳಲ್ಲಿ ಪಲ್ಟಿಯಾಗಿದೆ. ಸ್ಥಳೀಯರು ಆಸ್ಪತ್ರೆಗೆ ರವಾನೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡವರನ್ನ ಕಿಮ್ಸಗೆ ಕಳಿಸಲಾಗಿದೆ.

    ವಿದ್ಯಾರ್ಥಿಗಳ ಹಾಗೂ ಕಾರು ಚಾಲಕನ ಬಗ್ಗೆ ಮಾಹಿತಿ ದೊರಕಬೇಕಿದೆ. ನವಲಗುಂದ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.