Category: ಹುಬ್ಬಳ್ಳಿ- ಧಾರವಾಡ

  • ಶಾಸಕ ಶಂಕರ ಪಾಟೀಲಮುನೇನಕೊಪ್ಪರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ

    ಶಾಸಕ ಶಂಕರ ಪಾಟೀಲಮುನೇನಕೊಪ್ಪರಿಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನ

    ಬೆಂಗಳೂರು: ಸರಕಾರದ ವಿವಿಧ ಇಲಾಖೆಗಳ ಅಧೀನದ ನಿಗಮ ಮಂಡಳಿಗಳಿಗೆ ಅಧ್ಯಕ್ಷರಾಗಿದ್ದ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ನೀಡಿ ಆದೇಶ ಹೊರಡಿಸಲಾಗಿದೆ.


    ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆ ಬೆಂಗಳೂರು ಇದರ ಅಧ್ಯಕ್ಷರಾಗಿರುವ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ಸಿಕ್ಕಿದೆ.
    ಕೆಲವು ತಿಂಗಳ ಹಿಂದೆ ನಿಗಮಕ್ಕೆ ಆಯ್ಕೆ ಮಾಡಿದ್ದ ರಾಜ್ಯ ಸರಕಾರ, ಇದೀಗ ಬಹುತೇಕ ಎಲ್ಲ ನಿಗಮದ ಅಧ್ಯಕ್ಷರಿಗೂ ಈ ಸ್ಥಾನಮಾನವನ್ನು ನೀಡಿದ್ದು, ಧಾರವಾಡ ಜಿಲ್ಲೆಗೆ ಮತ್ತೊಂದು ರೀತಿಯ ಅವಕಾಶ ದೊರೆತಂತಾಗಿದೆ.
    ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಯಾವುದೇ ಸ್ಥಾನಮಾನವನ್ನು ಬಯಸದೇ ಇದ್ದರೂ ಅವರನ್ನ ಹುಡುಕಿಕೊಂಡು ಅವಕಾಶಗಳು ಬರುತ್ತಿವೆ.
    ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅಭಿಮಾನಿಗಳಲ್ಲಿ, ಶಾಸಕರು ಬೇಗನೇ ಮಂತ್ರಿಯಾಗಲಿ ಎಂಬ ಹೆಬ್ಬಯಕೆಯಿದ್ದು, ಅದು ಯಾವಾಗ ಶಂಕರ ಪಾಟೀಲಮುನೇನಕೊಪ್ಪರಿಗೆ ಸಿಗತ್ತೋ ಎಂದು ಕಾಯುವಂತಾಗಿದೆ. ಉತ್ತಮ ಆಡಳಿತ, ನೇರ ಮಾತುಗಳಿಂದ ಹೆಸರುವಾಸಿಯಾಗಿರುವ ಮುನೇನಕೊಪ್ಪ ಅವರು, ಸಚಿವ ಸ್ಥಾನವನ್ನ ನಿಭಾಯಿಸುವ ಜಾಣ್ಮೆ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

  • ಹತ್ತಿ ಖರೀದಿ ಮಾಡದ ಅಧಿಕಾರಿಗಳು: ಕಚೇರಿಯಲ್ಲೇ ಕೂಡಿ ಹಾಕಿದ ರೈತರು

    ಹತ್ತಿ ಖರೀದಿ ಮಾಡದ ಅಧಿಕಾರಿಗಳು: ಕಚೇರಿಯಲ್ಲೇ ಕೂಡಿ ಹಾಕಿದ ರೈತರು

    ಹುಬ್ಬಳ್ಳಿ: ರೈತರ ಹತ್ತಿಯನ್ನು ಖರೀದಿ ಮಾಡದೇ ಸತಾಯಿಸುತ್ತಿದ್ದಾರೆಂದು ಬೇಸರಗೊಂಡ ಮೂವತ್ತಕ್ಕೂ ಹೆಚ್ಚು ರೈತರು ಕರ್ನಾಟಕ ಕಾಟನ್ ಕಾರ್ಪೋರೇಷನ್ ಆಪ್ ಇಂಡಿಯಾದ ಅಧಿಕಾರಿಗಳನ್ನ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಕಚೇರಿಯಲ್ಲಿ ಕೂಡಿಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ.


    ನವಲಗುಂದ ಹಾಗೂ ಕುಂದಗೋಳದಿಂದ ಟ್ರ್ಯಾಕ್ಟರನಲ್ಲಿ ಹತ್ತಿಯನ್ನ ತುಂಬಿಕೊಂಡು ಬಂದಿರುವ ರೈತರು, ನಿನ್ನೆ ರಾತ್ರಿಯಿಂದಲೂ ಖರೀದಿ ಮಾಡುತ್ತಾರೆಂದು ಕಾಯುತ್ತಿದ್ದರು. ಆದರೆ, ಇದೀಗ ಖರೀದಿ ಮಾಡುವುದಿಲ್ಲವೆಂದು ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು, ಸೂಪರ್‌ವೈಜರಗಳಾದ ಪ್ರಸಾದ ಮತ್ತು ಪ್ರಕಾಶ ಎಂಬುವವರನ್ನ ಕಚೇರಿಯಲ್ಲಿ ಕೂಡಿಹಾಕಿ ಬೀಗ ಜಡಿದಿದ್ದಾರೆ.


    ಒಂದು ಟ್ರ್ಯಾಕ್ಟರನಲ್ಲಿ ಸುಮಾರು ಮೂವತ್ತು ಕ್ವಿಂಟಾಲ್ ಹತ್ತಿಯಿದ್ದು, ಅಂದಾಜು ಮೂವತೈದು ಟ್ರ್ಯಾಕ್ಟರಗಳಲ್ಲಿ ಹತ್ತಿ ತುಂಬಿದೆ. ಬೆಂಬಲ ಬೆಲೆ ಸಿಗುವ ಉದ್ದೇಶದಿಂದ ಬಂದಿರುವ ರೈತರಿಗೆ ಅಧಿಕಾರಿಗಳ ಬೇಜವಾಬ್ದಾರಿತನ ಭ್ರಮನಿರಸನ ಮೂಡಿಸಿದ್ದು, ಖರೀದಿ ಮಾಡಿಕೊಳ್ಳುವವರೆಗೂ ಬಿಡೋದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.
    ಅಧಿಕಾರಿಗಳು ಹೊರಗೆ ಹೋಗದಂತೆಯೂ ವಾಹನಗಳನ್ನ ಅಡ್ಡ ಹಾಕಿರುವ ರೈತರ ಗೋಳಿಗೆ ಅಧಿಕಾರಿಗಳು ಸ್ಪಂಧಿಸುತ್ತಾರಾ ಅಥವಾ ಇಲ್ಲವೋ ಎಂಬುದನ್ನ ಕಾದು ನೋಡಬೇಕಾಗಿದೆ. ತಾರಿಹಾಳದ ಕಚೇರಿಯಲ್ಲಿ ಗೊಂದಲ ಉಂಟಾಗಿದೆ.

  • ಧಾರವಾಡದಲ್ಲಿ ಗಾಂಜಾ ಮಾರಾಟ: ಇಬ್ಬರು ಗಾಂಜಿಗರ ಬಂಧನ

    ಧಾರವಾಡದಲ್ಲಿ ಗಾಂಜಾ ಮಾರಾಟ: ಇಬ್ಬರು ಗಾಂಜಿಗರ ಬಂಧನ

    ಧಾರವಾಡ: ಶಹರದ ಹೊಸ ಎಪಿಎಂಸಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ನಗರ ಆರ್ಥಿಕ ಅಪರಾಧ ಮತ್ತು ಮಾದಕ ವಸ್ತುಗಳ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.


    ಗಾಂಜಾ ಮಾರಾಟ ಮಾಡುತ್ತಿದ್ದ ಧಾರವಾಡ ನಗರದ ಹಾವೇರಿಪೇಟೆ ನಿವಾಸಿ ಮಲ್ಲಿಕಜಾನ ಮೊಹ್ಮದಹನೀಫ ಸೌದಾಗರ ಹಾಗೂ ಧಾರವಾಡ ತಾಲೂಕಿನ ಕಲ್ಲೂರ ಗ್ರಾಮದ ಉಳವಪ್ಪ ಬಸಪ್ಪ ತಳವಾರ ಎಂದು ಗುರುತಿಸಲಾಗಿದೆ. ಬಂಧಿತರಿಂದ 541 ಗ್ರಾಂ ಗಾಂಜಾ ಹಾಗೂ ಎರಡು ಮೊಬೈಲಗಳನ್ನ ವಶಕ್ಕೆ ಪಡೆಯಲಾಗಿದೆ.
    ಇನ್ಸಪೆಕ್ಟರ್ ಎಂ.ಎಸ್.ಹೂಗಾರ ನೇತೃತ್ವದಲ್ಲಿ ದಾಳಿ ನಡೆದು, ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವಳಿನಗರದಲ್ಲಿ ಗಾಂಜಾ ಮಾರಾಟ ತಡೆಯಲು ನಿರಂತರವಾಗಿ ದಾಳಿಗಳು ನಡೆಯುತ್ತಿದ್ದು, ಪೊಲೀಸರ ಕಣ್ತಪ್ಪಿಸಿ ಇನ್ನೂ ಗಾಂಜಾ ಮಾರಾಟ ನಡೆಯುತ್ತಿದೆ.
    ಗಾಂಜಿಗರನ್ನ ಬಂಧನ ಮಾಡುವಲ್ಲಿ ಯಶಸ್ವಿಯಾದ ಇನ್ಸಪೆಕ್ಟರ್ ಎಂ.ಎಸ್.ಹೂಗಾರ ತಂಡವನ್ನ ಪೊಲೀಸ್ ಕಮೀಷನರ್ ಲಾಬುರಾಮ ಶ್ಲಾಘಿಸಿದ್ದಾರೆ.

  • ಹುಬ್ಬಳ್ಳಿಯಲ್ಲಿ ಅಕ್ರಮ ಪಡಿತರ ಅಕ್ಕಿ ಕುಳಗಳ ಬಂಧನ

    ಹುಬ್ಬಳ್ಳಿಯಲ್ಲಿ ಅಕ್ರಮ ಪಡಿತರ ಅಕ್ಕಿ ಕುಳಗಳ ಬಂಧನ

    ಹುಬ್ಬಳ್ಳಿ: ಕಾಳಸಂತೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದ ಅಂಗಡಿಯ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಉಪನಗರ ಠಾಣೆ ಪೊಲೀಸರು ದಾಳಿ ಮಾಡಿರುವ ಘಟನೆ ಮಾರುತಿನಗರದಲ್ಲಿ ನಡೆದಿದೆ.

    ದಾಳಿಯ ಸಮಯದಲ್ಲಿ 2ಲಕ್ಷ 32 ಸಾವಿರ ರೂಪಾಯಿ ಮೌಲ್ಯದ 105 ಕ್ವಿಂಟಾಲ್ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದಿದ್ದು, ಹಳೇಹುಬ್ಬಳ್ಳಿಯ ಎಸ್.ಎಂ.ಕೃಷ್ಣನಗರದ ಮೆಹಬೂಬ ಸಯ್ಯದ, ಮಹ್ಮದಆರೀಫ ಪೀರಅಹ್ಮದ ಐನಾಪುರೆ ಹಾಗೂ ಈಶ್ವರನಗರದ ಮೆಹಬೂಬಸಾಬ ಬೇಪಾರಿ ಎಂಬುವವರನ್ನ ಬಂಧನ ಮಾಡಲಾಗಿದೆ.

    ಆರೋಪಿಗಳಿಂದ ಎರಡು ಮಿಷನ್, ಆಟೋರಿಕ್ಷಾಗಳನ್ನ ವಶಕ್ಕೆ ಪಡೆಯಲಾಗಿದೆ. ಮಾರುತಿನಗರದಲ್ಲಿ ಆರೋಪಿಯೋರ್ವನ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿದ ಸಮಯದಲ್ಲಿ 213 ಅಕ್ಕಿ ಚೀಲಗಳು ಸಿಕ್ಕಿವೆ. ಈ ಕುರಿತು ಪಾಲಿಕೆ ವಲಯ ಕಚೇರಿ-1ರ ಆಹಾರ ನಿರೀಕ್ಷಕ ಗಣೇಶ ಎರೇಸಿಮಿ ದೂರು ನೀಡಿದ್ದರು.

    ಕಾರ್ಯಾಚರಣೆಯಲ್ಲಿ ಉಪನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಎಸ್.ಕೆ.ಹೊಳೆಣ್ಣನವರ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅವಳಿನಗರದಲ್ಲಿ ಅಕ್ರಮ ಮರಳು ಸಾಗಾಟ: ಕಮೀಷನರ್ ಲಾಬುರಾಮ್ ಖಡಕ್ ಎಚ್ಚರಿಕೆ

    ಅವಳಿನಗರದಲ್ಲಿ ಅಕ್ರಮ ಮರಳು ಸಾಗಾಟ: ಕಮೀಷನರ್ ಲಾಬುರಾಮ್ ಖಡಕ್ ಎಚ್ಚರಿಕೆ

    ಹುಬ್ಬಳ್ಳಿ: ಅವಳಿನಗರದಲ್ಲಿ ಅಕ್ರಮ ಮರಳು ಸಾಗಾಟ ಮತ್ತು ಓವರಲೋಡ್ ಲಾರಿಗಳ ಸಾಗಾಟದ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಓವರಲೋಡ್ ಲಾರಿಗಳಿಂದ ರಸ್ತೆಗಳು ಕೂಡಾ ಹದಗೆಡುತ್ತಿವೆ. ಕೆಲವು ಕಡೆ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗೆ ಒತ್ತಡ ಹಾಕಿ, ಲಾರಿಗಳನ್ನ ಬಿಡಿಸಿ ಕಳಿಸುತ್ತಿದ್ದಾರೆಂಬ ದೂರಿನ ಬಗ್ಗೆ ಮಾತನಾಡಿದ ಪೊಲೀಸ್ ಕಮೀಷನರ್, ಅಂತಹ ಘಟನೆಗಳು ನಡೆದಿರುವುದು ಕಡಿಮೆ. ಆದರೆ, ಆ ಥರದ ಬಗ್ಗೆ ವಿಚಾರಣೆ ಮಾಡುತ್ತೇನೆ ಎಂದರು.

    ಅಕ್ರಮವಾಗಿ ಮರಳು ಸಾಗಾಟದಲ್ಲಿ ಅಧಿಕಾರಿಗಳ ಪಾತ್ರವಿದ್ದರೇ ಅದನ್ನೂ ಚೆಕ್ ಮಾಡುತ್ತೇನೆ. ಬಂದ ದೂರಿನ ಬಗ್ಗೆಯೂ ವಿಚಾರಣೆ ಮಾಡುವುದಾಗಿ ಕಮೀಷನರ್ ಲಾಬುರಾಮ್ ಹೇಳಿದರು.

    ಹುಬ್ಬಳ್ಳಿ-ಧಾರವಾಡಕ್ಕೆ ಪ್ರತಿ ದಿನವೂ ನೂರಾರು ಲಾರಿಗಳು ಮರಳು ತುಂಬಿಕೊಂಡು ಬರುತ್ತಿದ್ದು, ಅವುಗಳಲ್ಲಿ ಬಹುತೇಕ ಅಕ್ರಮವಾಗಿಯೇ ಸಾಗಾಟ ಮಾಡುತ್ತಿವೆ ಎಂಬ ದೂರಿದೆ. ಅಷ್ಟೇ ಅಲ್ಲ, ಪಾಸ್ ಇಲ್ಲದೇ ಲಾರಿಗಳನ್ನ ಓಡಿಸಿಕೊಂಡು ಮಾರಾಟ ಮಾಡುತ್ತಿದ್ದಾರೆಂಬ ಆರೋಪಗಳು ಇವೆ. ಇದನ್ನೇಲ್ಲ ಕಮೀಷನರ್ ಪರಿಗಣನೆಗೆ ತೆಗೆದುಕೊಳ್ಳುತ್ತಾರೆಂಬ ನಂಬಿಕೆ ನಾಗಕರಿದ್ದು.

  • ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಆತನ ಶವ: ಮಾಡಿದ್ದಾ..? ಆಗಿದ್ದಾ..?

    ಹುಬ್ಬಳ್ಳಿಯ ಉಣಕಲ್ ಕೆರೆಯಲ್ಲಿ ಆತನ ಶವ: ಮಾಡಿದ್ದಾ..? ಆಗಿದ್ದಾ..?

    ಹುಬ್ಬಳ್ಳಿ: ಉಣಕಲ್ ಕೆರೆಯಲ್ಲಿ ಸುಮಾರು 25 ವರ್ಷದ ಯುವಕನ ಶವವನ್ನ ನೋಡಿದ ವಾಕಿಂಗ್ ಮಾಡುವವರು ಗಾಬರಿಯಾಗಿ ಅಲ್ಲಿಂದ ಓಡಿ ಹೋದ ಘಟನೆ ಇಂದು ಬೆಳ್ಳಂಬೆಳಿಗ್ಗೆ ಉಣಕಲ್ ಕೆರೆಯ ಬಳಿ ಸಂಭವಿಸಿದೆ.

    ಕೆರೆಯಲ್ಲಿ ತೇಲುತ್ತಿದ್ದ ಯುವಕನ ಶವದ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಆಗಮಿಸಿರುವ ವಿದ್ಯಾನಗರ ಠಾಣೆಯ ಪೊಲೀಸರು, ಶವವನ್ನ ಹೊರಗೆ ತೆಗೆದಿದ್ದು, ಯುವಕನ ವಿಳಾಸವನ್ನ ಪತ್ತೆ ಹಚ್ಚಲು ಪ್ರಯತ್ನ ಮಾಡುತ್ತಿದ್ದಾರೆ.

    ಟೀ ಶರ್ಟ್ ಹಾಕಿರುವ ಯುವಕನ ಶವದ ಪ್ಯಾಂಟಿನಲ್ಲಿ ಗುರುತಿಸುವ ಯಾವುದೇ ಚೀಟಿಗಳು ಇಲ್ಲದೇ ಇರುವುದರಿಂದ ಈತ ಯಾರೂ ಎಂಬುದು ತಿಳಿಯುತ್ತಿಲ್ಲ. ಅಷ್ಟೇ ಅಲ್ಲ, ಇದು ಆತ್ಮಹತ್ಯೆಯಾ ಅಥವಾ ಬೇರೆ ಥರದ ಪ್ರಕರಣವಾ ಎಂಬುದು ಗೊತ್ತಾಗುತ್ತಿಲ್ಲ.

    ಕೆರೆಯಲ್ಲಿ ಶವವನ್ನ ತೆಗೆಯುವ ಸಮಯದಲ್ಲಿ ನೂರಾರೂ ಜನರು ಸೇರಿದ್ದರು. ಅಚ್ಚರಿಯಿಂದ ಕೆಲವರು ನೋಡುತ್ತಿದ್ದರೇ, ಇನ್ನೂ ಕೆಲವರು ವೀಡಿಯೋ ಮಾಡುವಲ್ಲಿ ಬಿಜಿಯಾಗಿದ್ದರು. ಶವವನ್ನ ಕಿಮ್ಸಗೆ ರವಾನೆ ಮಾಡಲಾಗಿದೆ. ಮೃತ ಯುವಕನ ವಿಳಾಸಕ್ಕಾಗಿ ವಿದ್ಯಾನಗರ ಠಾಣೆಯ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

  • ಅಪಘಾತ ಮಾಡಿ ಆಸ್ಪತ್ರೆಗೆ ಸೇರಿಸಿದ ಚಾಲಕ, ಸಾಯುತ್ತಾನೆಂದ ತಕ್ಷಣವೇ ಪರಾರಿಯಾದ

    ಅಪಘಾತ ಮಾಡಿ ಆಸ್ಪತ್ರೆಗೆ ಸೇರಿಸಿದ ಚಾಲಕ, ಸಾಯುತ್ತಾನೆಂದ ತಕ್ಷಣವೇ ಪರಾರಿಯಾದ

    ಧಾರವಾಡ: ತಾನು ಮಾಡಿದ ತಪ್ಪಿನಿಂದ ಯುವಕನಿಗೆ ಗಂಭೀರವಾಗಿ ಗಾಯಗೊಂಡ ತಕ್ಷಣವೇ ತಾನೇ ಮುಂದೆ ನಿಂತು ಆಸ್ಪತ್ರೆಗೆ ರವಾನೆ ಮಾಡಿದ್ದಾನೆ. ಗಾಯಾಳು ಯುವಕನ ಪ್ರಾಣ ಹೋಗತ್ತೆ ಎಂದು ಗೊತ್ತಾದ ತಕ್ಷಣವೇ ಇನ್ನೋವಾ ಚಾಲಕ ಆಸ್ಪತ್ರೆಯಿಂದಲೇ ಕಾಲ್ಕಿತ್ತ ಘಟನೆ ಧಾರವಾಡದಲ್ಲಿ ನಡೆದಿದೆ.

    ಧಾರವಾಡ-ಹುಬ್ಬಳ್ಳಿಯ ಪ್ರಮುಖ ರಸ್ತೆಯ ಗಾಂಧಿನಗರದ ಬಳಿ ಇನ್ನೋವಾ ಕಾರೊಂದು ಕ್ರಾಸ್ ನಲ್ಲಿ ಸಡನ್ನಾಗಿ ಬಂದಿದ್ದರಿಂದ ಬೈಕ್ ಸವಾರ ನೇರವಾಗಿ ಬಂದು ಎಡ ಬಾಗಿಲಿಗೆ ರಭಸವಾಗಿ ಗುದ್ದಿದ್ದಾನೆ. ಇದರಿಂದ ತೀವ್ರವಾದ ರಕ್ತಸ್ರಾವವಾಗಿ, ವಿನಾಯಕ ಬಣಕಾರ ಎಂಬ ಯುವಕ ಸಾವಿಗೀಡಾಗಿದ್ದಾನೆ.

    ಅಗಸಿಮನಿ ಎಂಬುವವರ ಹೆಸರಿನಲ್ಲಿರುವ ಇನ್ನೋವಾ ವಾಹನದ ಚಾಲಕ, ವಿನಾಯಕನನ್ನ ಧಾರವಾಡದ ಸಿವಿಲ್ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾನೆ. ಆದರೆ, ಆತನ ಪ್ರಾಣ ಉಳಿಯುವುದಿಲ್ಲವೆಂದು ಗೊತ್ತಾದ ತಕ್ಷಣವೇ ಅಲ್ಲಿಂದ ಪರಾರಿಯಾಗಿದ್ದಾನೆ.

    ಘಟನೆಗೆ ಸಂಬಂಧಿಸಿದಂತೆ ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಮೃತ ಯುವಕನ ಶವವನ್ನ ಮರಣೋತ್ತರ ಪರೀಕ್ಷೆ ಮಾಡಿಸಿ, ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

  • ಮೂರು ಠಾಣೆ-ಮೂರು ಓಸಿ ಕೇಸ್-ಐವರ ಬಂಧನ-28920 ನಗದು ವಶ

    ಮೂರು ಠಾಣೆ-ಮೂರು ಓಸಿ ಕೇಸ್-ಐವರ ಬಂಧನ-28920 ನಗದು ವಶ

    ಹುಬ್ಬಳ್ಳಿ: ಅವಳಿನಗರದ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎರಡು ಕಡೆ ಸಿಸಿಬಿ ತಂಡ ಇನ್ನೊಂದು ಠಾಣೆಯಲ್ಲಿ ಅದೇ ಠಾಣಾಧಿಕಾರಿ ನಡೆಸಿದ ದಾಳಿಯಲ್ಲಿ ಮಟಕಾ ಆಡುತ್ತಿದ್ದ ಐದು ಜನರನ್ನ ಬಂಧನ ಮಾಡಿ, ಸಾವಿರಾರೂ ರೂಪಾಯಿಯನ್ನ ವಶಕ್ಕೆ ಪಡೆದಿದ್ದಾರೆ.

    ಧಾರವಾಡ ಶಹರ ಠಾಣೆ ವ್ಯಾಪ್ತಿಯ ನಿಜಾಮುದ್ಧೀನ ಕಾಲನಿಯಲ್ಲಿ ಮಟಕಾ ಆಡುತ್ತಿದ್ದ ಈರಣ್ಣ ರಾಮಚಂದ್ರ ಹಿರೇಮಠ, ಗೋಪಾಲ ತಿಮ್ಮಪ್ಪ ಸೇರೆಗಾರ ಎಂಬುವವರನ್ನ ಬಂಧನ ಮಾಡಲಾಗಿದೆ. ಬಂಧಿತರಿಂದ 7300 ರೂಪಾಯಿ ವಶಕ್ಕೆ ಪಡೆದು ಕಾಣೂನು ಕ್ರಮ ಜರುಗಿಸಿದ್ದಾರೆ. ಇನ್ಸಪೆಕ್ಟರ್ ಎಂ.ಎಂ.ನದಾಫ ನೇತೃತ್ವದಲ್ಲಿ ದಾಳಿ ನಡೆದಿತ್ತು.

    ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದನಗರದಲ್ಲಿ ಮಟಕಾ ನಡೆಸುತ್ತಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಸಿಸಿಬಿ ಇನ್ಸಪೆಕ್ಟರ್ ಶ್ಯಾಮರಾವ ಸಜ್ಜನ ತಂಡ ಯಶಸ್ವಿಯಾಗಿದೆ. ಬಂಧಿತರನ್ನ ಮುಜಾಮೀಲ್ ಮಹ್ಮದಘಾಜೀಲ ಸುದರ್ಜಿ ಹಾಗೂ ಮಲ್ಲಿಕ ಅಬ್ದುಲಸತ್ತಾರ ಬಳಿಗಾರ ಎಂದು ಗುರುತಿಸಲಾಗಿದೆ. ಬಂಧಿತರಿಂದ 20300 ರೂಪಾಯಿ ನಗದು ಹಾಗೂ ಎರಡು ಮೊಬೈಲಗಳನ್ನ ವಶಕ್ಕೆ ಪಡೆಯಲಾಗಿದೆ.

    ಅಶೋಕನಗರ ಠಾಣೆ ವ್ಯಾಪ್ತಿಯ ಶಕ್ತಿ ಕಾಲನಿಯಲ್ಲಿ ಮಟಕಾ ಆಡುತ್ತಿದ್ದ ಓರ್ವನನ್ನ ಬಂಧನ ಮಾಡುವಲ್ಲಿ ಇನಸ್ಪೆಕ್ಟರ್ ರವಿಚಂದ್ರ ಡಿ.ಬಿ. ತಂಡ ಯಶಸ್ವಿಯಾಗಿದೆ. ಬಂಧಿತನನ್ನ ಸ್ವಾಗತಕಾಲನಿಯ ಇರ್ಷಾದ ಅಮೀರಸಾಬ ಹುಬ್ಬಳ್ಳಿ ಎಂದು ಗುರುತಿಸಲಾಗಿದೆ. ಬಂಧಿತನಿಂದ 1320 ನಗದು ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.

    ಈ ಮೂರು ಪ್ರಕರಣಗಳ ಬಗ್ಗೆ ಪೊಲೀಸ್ ಕಮೀಷನರ್ ಲಾಬುರಾಮ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  • ಹೊಸ ರೀತಿಯಲ್ಲಿ ವಿದ್ಯಾಗಮ ಆರಂಭ: ಸಚಿವ ಸುರೇಶಕುಮಾರ

    ಹೊಸ ರೀತಿಯಲ್ಲಿ ವಿದ್ಯಾಗಮ ಆರಂಭ: ಸಚಿವ ಸುರೇಶಕುಮಾರ

    ಬೆಂಗಳೂರು: ಕೋವಿಡ್‌ನಿಂದಾಗಿ ಶಾಲಾರಂಭ ತಡವಾದ ಹಿನ್ನೆಲೆಯಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದ್ದ ವಿದ್ಯಾಗಮ ಯೋಜನೆಯನ್ನು ಪರಿಷ್ಕರಿಸಿ ಸುಧಾರಿತ ಮತ್ತು  ಸುರಕ್ಷತಾ ಕ್ರಮಗಳೊಂದಿಗೆ ಹೊಸ  ರೀತಿಯಲ್ಲಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಕುರಿತು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.

    ಕಳೆದ ಆಗಸ್ಟ್ 8 ರಿಂದ ಆರಂಭಿಸಲಾಗಿದ್ದ ವಿದ್ಯಾಗಮವನ್ನು ಅಕ್ಟೋಬರ್ 10 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ವಿದ್ಯಾಗಮ ಆರಂಭಿಸಿದ್ದರಿಂದ ಮಕ್ಕಳು ಶಾಲೆಯಿಂದ ದೂರ ಉಳಿಯುವುದು, ಗ್ರಾಮೀಣ ಪ್ರದೇಶದಲ್ಲಿ ಪೋಷಕರೊಂದಿಗೆ ಶಾಲಾ ಸಮಯದಲ್ಲಿ ಕೆಲಸಗಳಿಗೆ  ತೆರಳುವುದು, ಬಾಲ್ಯ ವಿವಾಹ, ಬಾಲ್ಯ ಕಾರ್ಮಿಕ ಪದ್ಧತಿಯಂತಹ ಪಿಡುಗುಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಅನುವಾಗಿತ್ತು ಎಂದರು.

    ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ವಿದ್ಯಾಗಮವನ್ನು ಉಚ್ಚನ್ಯಾಯಾಲಯದ ಸಲಹೆಯಂತೆ ಸುರಕ್ಷತಾ ಕ್ರಮಗಳೊಂದಿಗೆ ಹೊಸ ರೂಪದಲ್ಲಿ ಅನುಷ್ಠಾನಗೊಳಿಸಲು ಇಲಾಖೆ ಮುಂದಾಗಿದ್ದು, ಹಲವಾರು ಸುಧಾರಣೆಗಳನ್ನು ಕೈಗೊಂಡಿದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ವಿದ್ಯಾಗಮ ಕಾರ್ಯಕ್ರಮವು ನಡೆಯಲು ಅನುವು ಮಾಡಿಕೊಡಲಾಗಿದೆ. ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದ್ದು, ಪ್ರತಿ ಶಾಲೆಯಲ್ಲಿ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಲಾಗುತ್ತದೆ. ಜ್ವರ, ಕೆಮ್ಮು, ನೆಗಡಿ ಲಕ್ಷಣಗಳು ಮತ್ತು ಕೋವಿಡ್-19ರ ಲಕ್ಷಣಗಳಿರುವ ವಿದ್ಯಾರ್ಥಿಗಳು ಬರುವಂತಿಲ್ಲ. ಸ್ಯಾನಿಟೈಸರ್, ಸೋಪ್ ಇತರೆ ನೈರ್ಮಲೀಕರಣ ವ್ಯವಸ್ಥೆ ಮಾಡಿಕೊಳ್ಳುವುದು. ವಿದ್ಯಾಗಮದೊಂದಿಗೆ ಆನ್‌ಲೈನ್ ಹಾಗೂ ಚಂದನ ವಾಹಿನಿಯ ಪಾಠಗಳು ಎಂದಿನಂತೆ ಮುಂದುವರೆಯಲಿವೆ.

    ಮಕ್ಕಳನ್ನು ಲಭ್ಯ ಶಿಕ್ಷಕರ ಸಂಖ್ಯೆ, ಲಭ್ಯ ಕೊಠಡಿಗಳ ಅನುಸಾರವಾಗಿ 15-20 ವಿದ್ಯಾರ್ಥಿಗಳ ತಂಡ ರಚಿಸುವುದು. ಆಯಾ ಸ್ತರದ  ಸ್ಥಳೀಯ ಸಂಸ್ಥೆಗಳು ಸ್ಯಾನಿಟೈಸೇಷನ್ ಜವಾಬ್ದಾರಿ ತೆಗೆದುಕೊಳ್ಳಲಿದ್ದು, ಮಕ್ಕಳು ಕುಡಿಯಲು ನೀರನ್ನು ತಮ್ಮೊಂದಿಗೆ ಮನೆಯಿಂದಲೇ ತರಲು ಸಲಹೆ ನೀಡಬಹುದು. ಅಗತ್ಯ ಬಿದ್ದಾಗ ಸ್ಥಳೀಯ ಆರೋಗ್ಯ ಇಲಾಖೆಯ ಸಹಕಾರ ಪಡೆಯಲು ಅವಕಾಶವಿದೆ. ಇದೇ ರೀತಿಯ ಹತ್ತು ಹಲವು ಕಟ್ಟುನಿಟ್ಟಿನ  ಕ್ರಮಗಳೊಂದಿಗೆ ವಿದ್ಯಾಗಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ  ಎಂದು ಸಚಿವ ಸುರೇಶಕುಮಾರ್ ತಿಳಿಸಿದ್ದಾರೆ.

    ಕೋವಿಡ್ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ವಿದ್ಯಾಗಮ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ವಹಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಕಾರ್ಯಕ್ರಮ ಅನುಷ್ಠಾನದ ಅಧಿಕಾರಿಗಳಾಗಿರುತ್ತಾರೆ. ತರಗತಿಗಳು ಪಾಳಿಗಳಲ್ಲಿ ಅಂದರೆ ಬೆಳಗ್ಗೆ 45 ನಿಮಿಷಗಳ 3 ಅವಧಿ ಹಾಗೂ ಮಧ್ಯಾಹ್ನದ ಪಾಳಿಯಲ್ಲಿ 3 ತರಗತಿಗಳನ್ನು ನಡೆಸಲಾಗುತ್ತದೆ.  ಒಂದು ದಿನಕ್ಕೆ 7ರಿಂದ 8 ತಂಡಗಳಲ್ಲಿ ವಿದ್ಯಾರ್ಥಿಗಳಿಗೆ ಬರಲು ಸೂಚಿಸಲಾಗುತ್ತಿದೆ.

    ವಿದ್ಯಾಗಮವು ಶಾಲೆಯ ಆರಂಭವಲ್ಲ. ಒಮ್ಮೆಗೆ ಅತಿ ಕಡಿಮೆ ಸಂಖ್ಯೆಯ ಮಕ್ಕಳ ತಂಡದೊಂದಿಗೆ ಶಾಲಾವರಣದಲ್ಲಿ ಲಭ್ಯವಿರುವ ಸ್ಥಳದಲ್ಲಿ ಅನುಕೂಲಕ್ಕೆ ತಕ್ಕಂತೆ ಪಾಠಗಳು ನಡೆಯುತ್ತವೆ. ತಜ್ಞರ ಸಮಿತಿಯ ಶಿಫಾರಸಿನನ್ವಯ ವೈಜ್ಞಾನಿಕವಾಗಿ ತರಗತಿಗಳು ನಡೆಯುತ್ತಿದ್ದು, ಎಲ್ಲ ರೀತಿಯ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳು-ಎಸ್ಒಪಿ ಆಧಾರದಲ್ಲಿ ಕೈಗೊಳ್ಳಲಾಗುತ್ತದೆ. ಮಕ್ಕಳು ತರಗತಿ ಪಾಠಗಳಿಗೆ ಹಾಜರಾದಂತೆ ಎಲ್ಲರೂ ಒಂದೇ ಬಾರಿಗೆ ಬರುತ್ತಿಲ್ಲ. ಆಯಾ ಪ್ರದೇಶದ ಮಾರ್ಗದರ್ಶಿ ಶಿಕ್ಷಕರು ತಮಗೆ ಸನಿಹದ ನೆರೆಹೊರೆಯ ಕೆಲವೇ ಮಕ್ಕಳನ್ನು ತಂಡದಲ್ಲಿ ಪಟ್ಟಿ ಮಾಡುತ್ತಾರೆ. ಇದು ಶಾಲಾರಂಭವಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ವಿದ್ಯಾಗಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದ್ದು, ಆನ್-ಲೈನ್ ಶಿಕ್ಷಣ ವಂಚಿತರಿಗೆ ಅನುಕೂಲವಾಗಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯು ಯಾವುದೇ ವಿದ್ಯಾರ್ಥಿಯ ಕಲಿಕೆಯನ್ನು ಹಕ್ಕಾಗಿ ಪರಿಗಣಿಸುತ್ತದೆ. ವಿದ್ಯಾರ್ಥಿಗಳಿಗೆ ಯಾವುದೇ ವಾತಾವರಣದಲ್ಲಿಯೂ ಶಿಕ್ಷಣವನ್ನು ನೀಡುವುದು  ಸರ್ಕಾರದ ಜವಾಬ್ದಾರಿಯಾದ ಹಿನ್ನೆಲೆಯಲ್ಲಿ ಮಕ್ಕಳು ಶಾಲೆಗಳಿಗೆ ಕಡ್ಡಾಯವಾಗಿ ದಾಖಲಾಗಬೇಕಿದೆ ಹಾಗೆಯೇ   ಅವರ ಕಲಿಕೆ ನಿರಂತರವಾಗಿರಬೇಕಿರುವಂತೆ ನೋಡಿಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ.

    ವಿದ್ಯಾಗಮ ತರಗತಿಗಳನ್ನು ಸರ್ಕಾರದ ಮಾರ್ಗದರ್ಶಿ ಸೂತ್ರದ ಪ್ರಕಾರ ಗ್ರಾಮೀಣ ಪ್ರದೇಶದ ಖಾಸಗಿ ಶಾಲೆಗಳು ವಿಶೇಷವಾಗಿ ಬಜೆಟ್ ಶಾಲೆಗಳು ತಮ್ಮ ಪರಿಸರದಲ್ಲಿ ಆರಂಭಿಸಿ ತಮ್ಮ ಶಾಲೆಯ ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಬಹುದಾಗಿದೆ. ಅದು ವಿದ್ಯಾಗಮವೇ ಆಗಿರಬಹುದು ಇಲ್ಲವೇ ಅವಕಾಶವಿದ್ದಲ್ಲಿ ಈಗಾಗಲೇ ಹೊರಡಿಸಿರುವ ಸುತ್ತೋಲೆಯನ್ವಯ ಆನ್‌ಲೈನ್ ಮೂಲಕವೂ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ವೇರ್ಪಡಿಸಬಹುದಾಗಿದೆ.  ಯಾವುದೇ ಶಾಲೆಗಳು ಲಭ್ಯವಿರುವ ಸಂಪನ್ಮೂಲಗಳಲ್ಲಿ ಒಟ್ಟಾರೆಯಾಗಿ ಮಕ್ಕಳ ಕಲಿಕೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಿದ್ದು, ಮಕ್ಕಳ ಹಿತವನ್ನು ಕಾಪಾಡಬೇಕಿದೆ ಎಂದು ಎಂದು ಸುರೇಶ್ ಕುಮಾರ್ ಸಚಿವರು ಹೇಳಿದ್ದಾರೆ.

    ಮಕ್ಕಳ ಕಲಿಕಾ ನಿರಂತರತೆಗೆ ವಿದ್ಯಾಗಮವು ಅನುಕೂಲವಾಗಿದ್ದು, ಶಿಕ್ಷಕರು ಮತ್ತು ಪೋಷಕರಲ್ಲಿ ಒಳ್ಳೆಯ ಭಾವನೆ ಮೂಡಿಸಿದೆ. ಮಕ್ಕಳ ಹಿತದೃಷ್ಟಿಯಿಂದ ವಿದ್ಯಾಗಮ ಕಾರ್ಯಕ್ರಮದ ರೂಪುರೇಷೆಗಳನ್ನು ಪರಿಷ್ಕರಿಸಿ ಪುನರಾರಂಭಿಸಲು ಇಲಾಖೆ ಎಲ್ಲ ರೀತಿಯಲ್ಲೂ ಸಿದ್ಧತೆ  ಮಾಡಿಕೊಂಡಿದ್ದು, ಶೀಘ್ರವೇ ಪುನರಾರಂಭಿಸಲಾಗುವುದು. ಒಟ್ಟಾರೆ ಪ್ರತಿಯೊಬ್ಬರೂ ನಮ್ಮ ಮಕ್ಕಳ ಹಿತದೃಷ್ಟಿಯಿಂದ ಮಕ್ಕಳ ಕಲಿಕಾ ನಿರಂತರತೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ  ಎಂದು ಅವರು ತಿಳಿಸಿದ್ದಾರೆ.

  • ಧಾರವಾಡದ ಮರಾಠಾ ಕಾಲನಿಯಲ್ಲಿ ಹತ್ತಿ ತುಂಬಿದ ಟ್ರ್ಯಾಕ್ಟರ್ ಪಲ್ಟಿ: ರೈತರಿಬ್ಬರು ಪಾರು

    ಧಾರವಾಡದ ಮರಾಠಾ ಕಾಲನಿಯಲ್ಲಿ ಹತ್ತಿ ತುಂಬಿದ ಟ್ರ್ಯಾಕ್ಟರ್ ಪಲ್ಟಿ: ರೈತರಿಬ್ಬರು ಪಾರು

    ಧಾರವಾಡ: ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಿಂದ ಧಾರವಾಡ ತಾಲೂಕಿನ ನರೇಂದ್ರ ಬಳಿಯಿರುವ ಹತ್ತಿ ಜಿನ್ನಿಂಗ್ ಪ್ಯಾಕ್ಟರಿಗೆ ತರುತ್ತಿದ್ದ ಹತ್ತಿಯ ಟ್ರ್ಯಾಕ್ಟರ್ ಮರಾಠಾ ಕಾಲನಿಯ ಗಣೇಶ ದೇವಸ್ಥಾನದ ಬಳಿ ಸಂಭವಿಸಿದ್ದು, ರೈತರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಹತ್ತಿಯ ಬೆಲೆ ಜಿನ್ನಿಂಗ್ ಪ್ಯಾಕ್ಟರಿಯಲ್ಲಿ ಹೆಚ್ಚು ಸಿಗುತ್ತದೆ ಎಂದುಕೊಂಡು ಸವದತ್ತಿಯಿಂದ ಟ್ರ್ಯಾಕ್ಟರಿನಲ್ಲಿ ಹತ್ತಕ್ಕೂ ಹೆಚ್ಚು ಅಂಡಿಗೆಗಳನ್ನ ಹೇರಿಕೊಂಡು ನರೇಂದ್ರದ ಬಳಿಯಿರುವ ಜಿನ್ನಿಂಗ್ ಪ್ಯಾಕ್ಟರಿಗೆ ಬರುತ್ತಿದ್ದಾಗ ದುರ್ಘಟನೆ ನಡೆದಿದೆ.

    ಧಾರವಾಡದ ಮರಾಠಾ ಕಾಲನಿಯ ದೇವಸ್ಥಾನದ ಬಳಿ ರಸ್ತೆ ಚೂರು ಏರಿಕೆಯಿದ್ದ ಪರಿಣಾಮ ಟ್ರ್ಯಾಕ್ಟರ್ ಟೇಲರ್ ಪಲ್ಟಿಯಾಗಿದೆ. ತಕ್ಷಣವೇ ಎಂಜಿನದಲ್ಲಿ ಕುಳಿತಿದ್ದ ಸಂಗಪ್ಪ ಹಾಗೂ ದೇವರಾಜು ಜಿಗಿದು ಪ್ರಾಣವನ್ನ ಉಳಿಸಿಕೊಂಡಿದ್ದಾರೆ.

    ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆ ಪೊಲೀಸರು ಆಗಮಿಸಿದ್ದು, ರಸ್ತೆ ಸಂಚಾರವನ್ನ ಸುಗಮಗೊಳಿಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.