Posts Slider

Karnataka Voice

Latest Kannada News

ಧಾರವಾಡ: ಬಾರ್ ಮ್ಯಾನೇಜರ್ ಬೈಕ್ ಸ್ಕೀಡ್- ಚಿಂತಾಜನಕ ಸ್ಥಿತಿ

Spread the love

ಧಾರವಾಡ: ನಗರದ ಪ್ರಮುಖ ಬಾರವೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ದ್ವಿಚಕ್ರವಾಹನದಲ್ಲಿ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಧಾರವಾಡ ಮರಾಠಾ ಕಾಲನಿಯಲ್ಲಿ ಸಂಭವಿಸಿದೆ.

ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಮಂಜುನಾಥ ಗೋಪಾಲ ಮಲ್ಲೂರ ಎಂಬಾತನೇ ತೀವ್ರವಾಗಿ ಗಾಯಗೊಂಡಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸಿವಿಲ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮರಾಠಾ ಕಾಲನಿಯಲ್ಲಿ ರಸ್ತೆಗಳು ಇನ್ನೂ ರಿಪೇರಿಯಾಗದ ಹಿನ್ನೆಲೆಯಲ್ಲಿ ತಗ್ಗು-ದಿನ್ನೆಗಳು ಹಾಗೇಯೇ ಇದ್ದು, ಗುಂಡಿಗೆ ಬೈಕ್ ಹೋಗುವುದನ್ನ ತಪ್ಪಿಸಲು ಹೋಗಿ ಆವಾಂತರ ಸಂಭವಿಸಿದೆ.

ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಹಿತಿಯನ್ನ ಸಂಗ್ರಹಿಸಿ ಮುಂದಿನ ಕಾನೂನು ಕ್ರಮಗಳನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed