Posts Slider

Karnataka Voice

Latest Kannada News

ಹುಬ್ಬಳ್ಳಿ-ಎಎಸ್ಐ ಸಾವು: ಮಡುವುಗಟ್ಟಿದ ನೋವು

1 min read
Spread the love

ಧಾರವಾಡ: ರಾಯಾಪುರದಲ್ಲಿರುವ ರಾಜ್ಯ ಸಶಸ್ತ್ರ ಮೀಸಲು ಪಡೆಯ ಸಹಾಯಕ ಸಬ್ ಇನ್ಸ್ ಪೆಕ್ಟರರಾಗಿದ್ದವರು, ತೀವ್ರ ಅನಾರೋಗ್ಯದಿಂದ ಸಾವಿಗೀಡಾದ ಘಟನೆ ನಡೆದಿದೆ.

ಹುಬ್ಬಳ್ಳಿ ನವನಗರದ ಕೆಸಿಸಿ ಬ್ಯಾಂಕ ಕಾಲನಿ ನಿವಾಸಿ ಭೂಪಾಲ ಬಸವಣ್ಣೆಪ್ಪ ಮರೆಣ್ಣನವರ ಎಂಬುವವರೇ ಮೃತಪಟ್ಟಿದ್ದು, ಕೆಲವು ದಿನಗಳಿಂದ ಅನಾರೋಗ್ಯ ಕ್ಕೆಒಳಗಾಗಿ ಚಿಕಿತ್ಸೆಯನ್ನ ಪಡೆಯುತ್ತಿದ್ದರು. ಚಿಕಿತ್ಸೆ ವಿಫಲವಾದ ಪರಿಣಾಮ ಎಎಸ್ಐ ಇನ್ನಿಲ್ಲವಾಗಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹನ್ನಿಕೇರಿ ಗ್ರಾಮದ ಬಸವಣ್ಣೇಪ್ಪ, ಹಲವು ವರ್ಷಗಳಿಂದ ಸಶಸ್ತ್ರ ಮೀಸಲು ಪಡೆಯಲು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು. ಕರ್ತವ್ಯ ನಿರ್ವಹಿಸುವುದು ಬಂದರೇ, ಹಗಲು ರಾತ್ರಿಯನ್ನದೇ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಹೊಂದಿದ್ದಾರೆ. ಎಎಸ್ಐ ನಿಧನದಿಂದ ಸಶಸ್ತ್ರ ಮೀಸಲು ಪಡೆಯಲ್ಲೂ ನೀರವಮೌನ ಆವರಿಸಿದೆ.


Spread the love

Leave a Reply

Your email address will not be published. Required fields are marked *