AIMIM ಹೋರಾಟ- ಫೇಸ್ ಬುಕ್ ಲ್ಲಿ ಕಾಂಗ್ರೆಸ್ ಅಧ್ಯಕ್ಷ LIKE…!
Warning: Attempt to read property "post_excerpt" on null in /home/karnatakavoice2026s/webapps/karnatakavoice2026s/wp-content/themes/newsphere/inc/hooks/hook-single-header.php on line 67
ಧಾರವಾಡ: AIMIM ಪಕ್ಷ BJP ಯೊಂದಿಗೆ ಆಂತರಿಕ ಒಡಂಬಡಿಕೆ ಮಾಡಿಕೊಂಡು ಬೇರೆ ಬೇರೆ ರಾಜ್ಯಗಳ ಚುನಾವಣೆಗಳಲ್ಲಿ ಸ್ಪರ್ಧಿಸಿ BJP ಗರ ನೆರವು ಮಾಡುತ್ತಿದೆ ಎಂದು ಆರೋಪಿಸುವ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡರು AIMIM ಪಕ್ಷ ಕೈಗೊಂಡ ಪ್ರತಿಭಟನೆಯೊಂದರ ಸಾಮಾಜಿಕ ಜಾಲತಾಣದಲ್ಲಿಯ ಪೋಸ್ಟ್ ವೊಂದಕ್ಕೆ ‘Like’ ಮಾಡುವ ಮೂಲಕ ಗೊಂದಲ ಮೂಡಿಸಿದ್ದಾರೆ.
ನಗರದ ಹಲವಾರು WhatsApp ಗ್ರುಪ್ ಗಳಲ್ಲಿ ಸಂಜೆಯಿಂದ ಹರಿದಾಡುತ್ತಿರುವ ‘Facebook’ನ ಫೋಟೋ ಕ್ಲಿಪ್ ಹಾಗೂ ಅದರೊಂದಿಗಿನ ಮೆಸೇಜ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಲೆಕೆಡೆಸಿಕೊಳ್ಳುವಂತೆ ಮಾಡಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭಯದಲ್ಲಿರುವ ಅಲ್ತಾಫ್ ಹಳ್ಳೂರ ಸಾಹೇಬರೆ ಈ ಘಟನೆಗೆ ಕೇಂದ್ರ ಬಿಂದು ಆಗಿರುವುದರಿಂದ ಅವರ ವಿರೋಧಿಗಳು ಇದೇ ಸಂದರ್ಭವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
ಮಹಾನಗರ ಜಿಲ್ಲಾ ಅಧ್ಯಕ್ಷ ಅಲ್ತಾಫ್ ಹಳ್ಳೂರ ಅವರು ‘ದುಶ್ಮನ್ ಕಾ ದುಶ್ಮನ್ ದೋಸ್ತ್’ (ಮೋದಿ ವಿರೋಧಿ) ಎಂದು ಭಾವಿಸಿ AIMIM ಹೋರಾಟದ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಗೆ Like ಮಾಡಲು ಹೋಗಿ ಅವರ ವಿರೋಧಿಗಳಿಗೆ ಆಹಾರವಾಗಿದ್ದಾರಲ್ಲದೆ, ಅವರ ಹಿತೈಷಿಗಳು ‘ಪಾಪ ಅಧ್ಯಕ್ಷರು’ ಎನ್ನುವಂತಾಗಿದೆ.
ಹಳ್ಳೂರವರ ಈ ಪ್ರಮಾದವನ್ನ ರಾಜಕೀಯಕ್ಕಾಗಿ ಅವರ ಜನರೇ
ಇದರ ಲಾಭ ಎತ್ತಲು ಎಲ್ಲ ರೀತಿಯ ಹರಸಾಹಸ ಪಡುತ್ತಿದ್ದಾರೆ.

