Karnataka Voice

Latest Kannada News

ಕಾರು ಚಲಾಯಿಸಿದ್ದು ನಾನೇ- ವಿಜಯ ಕುಲಕರ್ಣಿ….!

ಧಾರವಾಡ: ಬೆಳಗಾವಿಯಿಂದ ಬರುವ ಸಮಯದಲ್ಲಿ ಎದುರಿಗೆ ಬಂದ ಬೈಕ್ ಸವಾರನನ್ನ ತಪ್ಪಿಸಲು ಹೋಗಿ, ರಸ್ತೆ ಅಪಘಾತ ನಡೆದಿದೆ. ಕಾರನ್ನ ನಾನೇ ಚಲಾಯಿಸುತ್ತಿದ್ದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಹೇಳಿದರು.

ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ಧಾರವಾಡ ಸಂಚಾರಿ ಠಾಣೆಯ ಮುಂದೆ ವಿಜಯ ಕುಲಕರ್ಣಿಯವರು ನೀಡಿದ ಹೇಳಿಕೆ…

ಧಾರವಾಡದ ಕುಮಾರೇಶ್ವರ ನಗರದ ಬಳಿ ನಡೆದ ಸರಣಿ ಅಪಘಾತದ ಕಾರನ್ನ ಚಲಾಯಿಸುತ್ತಿದ್ದರ ಬಗ್ಗೆ ಧಾರವಾಡ ಸಂಚಾರಿ ಠಾಣೆಗೆ ಆಗಮಿಸಿದ್ದ ವಿಜಯ ಕುಲಕರ್ಣಿ, ಘಟನೆಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು.

ನಾನು ಕಾರನ್ನ ಚಲಾಯಿಸಿಕೊಂಡು ಬರುವಾಗ ಬೈಕ್ ಸವಾರನೋರ್ವ ಅಡ್ಡ ಬಂದ. ಆತನನ್ನ ತಪ್ಪಿಸಲು ಹೋಗಿ ಬೇರೆ ಬೈಕುಗಳಿಗೆ ಡಿಕ್ಕಿಯಾಯಿತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು ನಾನೇ. ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಿದ ನಂತರವೇ ನಾನು ಅಲ್ಲಿಂದ ತೆರಳಿದ್ದೇನೆ. ಮದ್ಯ ಸೇವನೆ ಮಾಡಿದ್ದೇನೆ ಎನ್ನುವುದು ಸುಳ್ಳು. ಹಾಗೇಲ್ಲ ಅಪಪ್ರಚಾರ ಮಾಡಬೇಡಿ ಎಂದು ಹೇಳಿದರು.

ಧಾರವಾಡದ ಕುಮಾರೇಶ್ವರನಗರದ ಬಳಿಯಲ್ಲಿ ವಿಜಯ ಕುಲಕರ್ಣಿ ಚಲಾಯಿಸುತ್ತಿದ್ದ ಕಾರು ಸರಣಿ ಅಪಘಾತಪಡಿಸಿತ್ತು. ಘಟನೆಯಲ್ಲಿ ಇಬ್ಬರು ದುರ್ಮರಣಕ್ಕೀಡಾಗಿದ್ದು, ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *