Karnataka Voice

Latest Kannada News

ಕುಂದಗೋಳ ಸಂಶಿ ಬಳಿ “ಹಾರಿಬಲ್” ಅಪಘಾತ…!

ಕುಂದಗೋಳ: ತಾಲೂಕಿನ ಸಂಶಿ ಗ್ರಾಮದ ಬಳಿ ಬೈಕಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ, ವ್ಯಕ್ತಿಯ ದೇಹವೊಂದು ಛಿದ್ರ ಛಿದ್ರವಾಗಿದ್ದು, ಸ್ಥಳದಲ್ಲಿಯೇ ವ್ಯಕ್ತಿ ಸಾವಿಗೀಡಾದ ಘಟನೆ ನಡೆದಿದೆ.

ಮೃತ ವ್ಯಕ್ತಿಯ ಹೆಸರು ಅಶೋಕ ಎಂದು ಗೊತ್ತಾಗಿದೆ..

ಕುಂದಗೋಳದಿಂದ ಸಂಶಿ ಮೂಲಕ ತನ್ನೂರಿಗೆ ಹೊರಟಿದ್ದ ವ್ಯಕ್ತಿಯ ಬೈಕಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಮೃತ ದೇಹವೂ ಸುಮಾರು 50 ಅಡಿಗಳಿಗೂ ಹೆಚ್ಚು ದೂರ ವಾಹನದೊಂದಿಗೆ ಹೋಗಿದ್ದು, ನಡುವಿನ ಕೆಳಭಾಗ ಸಂಪೂರ್ಣವಾಗಿ ಛಿದ್ರವಾಗಿದೆ.

ರಸ್ತೆಯಲ್ಲಿಯೇ ಸಾವಿಗೀಡಾದ ವ್ಯಕ್ತಿಯ ಮೃತದೇಹವನ್ನ ಈಗಷ್ಟೇ ಕುಂದಗೋಳ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು, ಅಪಘಾತ ಪಡಿಸಿ ನಾಪತ್ತೆಯಾಗಿರುವ ವಾಹನದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅವಘಡದಲ್ಲಿ ಸಾವಿಗೀಡಾದ ವ್ಯಕ್ತಿಯು ಹಸಿರು ಟವೆಲ್ ಹಾಕಿಕೊಂಡಿದ್ದು, ಯಾವ ಗ್ರಾಮದ ರೈತ ಎಂಬುದು ಇನ್ನೂ ಪತ್ತೆಯಾಗಿಲ್ಲ. ಘಟನೆಗೆ ನಿಖರವಾದ ಕಾರಣವನ್ನ ಪ್ರಕರಣ ದಾಖಲು ಮಾಡಿಕೊಂಡಿರುವ ಕುಂದಗೋಳ ಠಾಣೆಯ ಪೊಲೀಸರು, ಪತ್ತೆ ಹಚ್ಚುತ್ತಿದ್ದಾರೆ.

Leave a Reply

Your email address will not be published. Required fields are marked *