ಕೇಂದ್ರ ಸಚಿವರ ಕಾರು ಗೋಕರ್ಣದ ಬಳಿ ಅಪಘಾತ: ಪತ್ನಿ ಸಾವು, ಸಚಿವರ ಸ್ಥಿತಿ ಗಂಭೀರ

ಕಾರವಾರ : ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀ ಪಾದ ನಾಯ್ಕ ಅವರ ಕಾರು ಪಲ್ಟಿಯಾಗಿ ಸಚಿವರ ಪತ್ನಿ ಸಾವನ್ನಪ್ಪಿ ಸಚಿವ ಶ್ರೀಪಾದ ನಾಯಕ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಹೊಸಕಂಬಿ ಹೆದ್ದಾರಿಯಲ್ಲಿ ನಡೆದಿದೆ. ಸಚಿವರು ಕುಟುಂಬಸ್ಥರ ಜೊತೆ ಯಲ್ಲಾಪುರ ಚಂದಗುಳಿ ದೇವಸ್ಥಾನಕ್ಕೆ ಬೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಗೋಕರ್ಣದ ಮಹಾಬಲೇಶ್ವರ ದೇಗುಲಕ್ಕೆ ತೆರಳುತ್ತಿದ್ದ ವೇಳೆ ಕಾರು ಪಲ್ಟಿಯಾಗಿದ್ದು. ಸಚಿವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಗಂಭೀರವಾಗಿ ಗಾಯಗೊಂಡಿರು ಶ್ರೀಪಾದ ನಾಯ್ಕ ಹಾಗೂ ಇನ್ನೂಳಿದ ಮೂವರನ್ನ ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ..