ಉಣಕಲ್ ಕ್ರಾಸ್ ಬಳಿ ಅಪಘಾತ- ಮುರಿದ ಚಕ್ಕಡಿ, ರೈತನಿಗೆ ಗಾಯ: ಶಾಸಕ ಅಮೃತ ದೇಸಾಯಿಯವರೇ ಇದನ್ನೋಮ್ಮೆ ನೋಡಿ..
1 min readರೈತನಿಗೆ ವಾಹನ ಬಡಿದ ಹಿನ್ನೆಲೆಯಲ್ಲಿ ಉಣಕಲ್ ಕ್ರಾಸ್ ಬಳಿ ಕೆಲವರ ನಡುವೆ ಜಗಳ ಕೂಡಾ ಆರಂಭಗೊಂಡಿದ್ದು, ರಸ್ತೆಯ ಮಧ್ಯೆದಲ್ಲೇ ಗಲಾಟೆ ಆರಂಭವಾಗಿದೆ.
ಧಾರವಾಡ: ಈ ರಸ್ತೆಯಲ್ಲಿ ಹೋಗಿ ಮತ್ತೆ ಮನೆಗೆ ಮರಳಿದರೇ ಅವತ್ತು ಅವರ ನಸೀಬು ಸರಿಯಾಗಿದೆ ಎಂದೇ ತಿಳಿದುಕೊಳ್ಳಬೇಕು. ಹಾಗಾಗಿದೆ ಹೆಬ್ಬಳ್ಳಿ-ಹುಬ್ಬಳ್ಳಿ ರಸ್ತೆಯ ಉಣಕಲ್ ಕ್ರಾಸ್ ಪ್ರದೇಶ.
ಈಗ ಕೆಲವೇ ನಿಮಿಷಗಳಲ್ಲಿ ಮತ್ತೆ ಒಂದು ಅಪಘಾತವಾಗಿದೆ. ಉಣಕಲ್ ಕಡೆಯಿಂದ ಬರುವ ರೈತರ ಚಕ್ಕಡಿಗಳಾಗಲಿ, ವಾಹನಗಳಾಗಲಿ ಬರುವುದರೊಳಗೆ ಧಾರವಾಡ- ನವಲಗುಂದ ರಸ್ತೆಯಲ್ಲಿ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತವೆ.
ಈಗ ನಡೆದ ಅಪಘಾತದಲ್ಲೂ ಮಾರಡಗಿ ಗ್ರಾಮದ ರೈತ ಮಲ್ಲಪ್ಪ ಚಂದ್ರಣ್ಣನವರ ಗಾಯಗೊಂಡಿದ್ದಾರೆ. ಚಕ್ಕಡಿಯಂತೂ ಮತ್ತೆ ಉಪಯೋಗ ಮಾಡದಂತೆ ಮುರಿದು ಹೋಗಿದೆ. ಮೊರಬಕ್ಕೆ ಗ್ರಾಮಕ್ಕೆ ಹೊರಟಿದ್ದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ರೈತ ಗೋಳಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಯಾಪುರ ಬಳಿಯ ಗಾರ್ಮೆಂಟ್ ನೌಕರರನ್ನ ಹೊತ್ತು ನಡೆದಿದ್ದ ಟಾಟಾ ಏಸ್ ಚಕ್ಕಡಿಗೆ ಡಿಕ್ಕಿ ಹೊಡೆದಿದೆ.
ತಿಂಗಳಲ್ಲಿ ಎರಡ್ಮೂರು ಬಾರಿ ಅಪಘಾತಗಳು ಇದೇ ಸ್ಥಳದಲ್ಲಿಯೇ ಆಗುತ್ತಿವೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ, ಜಿಲ್ಲಾ ಪಂಚಾಯತಿ ಇಂಜಿನಿಯರಗಳಾಗಲಿ ಯಾವುದೇ ಕ್ರಮವನ್ನ ತೆಗೆದುಕೊಳ್ಳುತ್ತಿಲ್ಲ. ಪ್ರಮುಖ ರಸ್ತೆಗೆ ರೋಡ್ ಬ್ರೇಕ್ ಹಾಕಿಸಿದರೇ ಅದೇಷ್ಟೋ ಅಪಘಾತಗಳನ್ನ ತಡೆಯಬಹುದು.
ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ಕೊಟ್ಟು ಈ ಸಮಸ್ಯೆಯನ್ನ ಬಗೆಹರಿಸುವ ಜವಾಬ್ದಾರಿ ಕ್ಷೇತ್ರದ ಶಾಸಕ ಅಮೃತ ದೇಸಾಯಿಯವರ ಮೇಲಿದ್ದು, ಇದು ಸರಿಯಾಗತ್ತಾ ಎಂಬುದನ್ನ ಜನರು ಕಾದು ನೋಡುತ್ತಿದ್ದಾರೆ.