Karnataka Voice

Latest Kannada News

ನಿಂತ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ನಾಲ್ವರಿಗೆ ಗಾಯ, ಓರ್ವನ ಸ್ಥಿತಿ ಚಿಂತಾಜನಕ..!

ಹುಬ್ಬಳ್ಳಿ: ಕುಟುಂಬದೊಂದಿಗೆ ಬೈಕಿನಲ್ಲಿ ಹೊರಟಿದ್ದ ನಾಲ್ವರು ಡಿಸೇಲ್ ಖಾಲಿಯಾಗಿ ನಿಂತಿದ್ದ ಟ್ರ್ಯಾಕ್ಟರಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂರು ವರ್ಷದ ಮಗು ಸೇರಿ ನಾಲ್ವರಿಗೆ ಗಾಯಗಳಾದ ಘಟನೆ ಹುಬ್ಬಳ್ಳಿ ತಾಲೂಕಿನ ಹೆಬಸೂರ ಟೋಲ್ ಗೇಟ್ ಬಳಿ ನಡೆದಿದೆ.

ಬದಾಮಿ ತಾಲೂಕಿನ ಮಮಟಗೇರಿಗೆ ಹೊರಟಿದ್ದ ಸುನೀಲ ಕಾಳೆ, ಮಂಜು ಕಾಳೆ, ಆಕಾಶ ಹಾಗೂ ಲಕ್ಷ್ಮೀ ಕಾಳೆ ಎನ್ನುವವರಿಗೆ ಗಾಯಗೊಂಡಿದ್ದು, ಬೈಕ್ ಸವಾರ ಸುನೀಲ ಕಾಳೆ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸಗೆ ರವಾನೆ ಮಾಡಿದ್ದಾರೆ.

ಹುಬ್ಬಳ್ಳಿಯಿಂದ ನವಲಗುಂದ ಕಡೆಗೆ ಹೊರಟಿದ್ದ ಟ್ರ್ಯಾಕ್ಟರ್ ಚಾಲಕ ಅಶೋಕ ಗುಡಿಸಲಮನಿ ಎಂಬಾತ, ಡಿಸೇಲ್ ಖಾಲಿಯಾಗಿದ್ದರಿಂದ ಟೋಲ್ ಬಳಿ ನಿಲ್ಲಿಸಿದಾಗ ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ಬೈಕಿನಲ್ಲಿದ್ದ ಮೂರು ವರ್ಷದ ಆಕಾಶ ಅದೃಷ್ಟವಶಾತ್ ಚಿಕ್ಕಪುಟ್ಟ ಗಾಯಗಳಿಂದ ಪಾರಾಗಿದ್ದಾನೆ.

Leave a Reply

Your email address will not be published. Required fields are marked *