ಹದಗೆಟ್ಟ ರಸ್ತೆ: ಗುದ್ದಲಿ, ಸಲಿಕೆ ಹಿಡಿದ ಆಪ್ ಪ್ರಮುಖರು
1 min readಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಮಂಜುನಾಥ ನಗರ ಕ್ರಾಸ್ ನ ಮುಖ್ಯರಸ್ತೆಯಲ್ಲಿ ಕಳೆದ ಆರು ತಿಂಗಳಿಂದ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದು, ಪರಿಣಾಮ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದು ಸಂಚಾರಕ್ಕೆ ಅಡೆತಡೆ ಉಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಶಶಿಕುಮಾರ್ ಸುಳ್ಳದ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪೋಲಾದ ನೀರು ಹರಿಯಲು ಪರ್ಯಾಯ ಮಾರ್ಗ ಮಾಡಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸಿದರು.
ಮಂಜುನಾಥ ನಗರ ಕ್ರಾಸ್ ನ ಮುಖ್ಯರಸ್ತೆಯಲ್ಲಿ ಜನಸಾಮಾನ್ಯರಿಂದ ಹಿಡಿದು ಉನ್ನತ ಅಧಿಕಾರಿಗಳು ಸಂಚಾರ ಮಾಡುವರು. ಅಲ್ಲದೇ ಈ ಭಾಗದ ಅನೇಕ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಅತಿ ಹೆಚ್ಚು ಜನ ಸಂಚಾರ, ವಾಹನ ದಟ್ಟನೆಯಿಂದ ಕೂಡಿರುವ ರಸ್ತೆ ಇದಾಗಿದೆ. ಆದರೆ ಈ ರಸ್ತೆಯೇ ಕಳೆದ ಹಲವಾರು ತಿಂಗಳಿಂದ ಹದಗೆಟ್ಟು ಹೋಗಿದ್ದರು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸುವ ಕೆಲಸ ಮಾಡಿಲ್ಲ.
ಇನ್ನೂ ಈ ಬಗ್ಗೆ ಪಾಲಿಕೆ ಅಧಿಕಾರಿಗಳು, ಜಲಮಂಡಳಿ, ಪಿ ಡಬ್ಲೂ ಡಿ ಇಲಾಖೆಯವರಿಗೆ ಕೇಳಿದರೆ ಒಬ್ಬರ ಮೇಲೆ ಇನ್ನೊಬ್ಬರು ಹಾಕುತ್ತಿದ್ದಾರೆ. ಹದಗೆಟ್ಟ ರಸ್ತೆಯಿಂದ ಜನರು ಮಾನಸಿಕ ಗುಂಡಿಗಳ ರಸ್ತೆ ಹುಡುಕಬೇಕಾಗಿದೆ. ಹಿಂಸೆ, ದೈಹಿಕ ಹಿಂಸೆ ಅನುಭವಿಸುವಂತಾಗಿದೆ ಕೂಡಲೇ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಪಕ್ಷದ ಮುಖಂಡರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಲಮಂಡಳಿ ಅಧಿಕಾರಿಗಳು ಮುಂದಿನ ಮೂರು ದಿನಗಳಲ್ಲಿ ನೀರು ಪೋಲಾಗುತ್ತಿರುದನ್ನು ತಡೆಯಲು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಡೇನಿಯಲ್ ಐಕೋಸ್, ಶಿವಕುಮಾರ ಬಾಗಲಕೋಟೆ, ವಿನಾಯಕ ಚೌಹಾಣ, ಮೆಹಬೂಬ್ ಹರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.