Karnataka Voice

Latest Kannada News

ಧಾರವಾಡದ ಬಳಿ ಭೀಕರ ಅಪಘಾತ: 20 ಅಡಿ ಕೆಳಗೆ ಬಿದ್ದು ಮಹಿಳೆ ಸಾವು: ಮೂವರ ಸ್ಥಿತಿ ಚಿಂತಾಜನಕ

ಧಾರವಾಡ: ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯನಿರ್ವಹಿಸಿ ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ರಭಸವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸೇತುವೆಯ ಮೇಲಿಂದ 20 ಅಡಿ ಕೆಳಗೆ ಬಿದ್ದು ಸಾವನ್ನಪ್ಪಿದ್ದು, ಇನ್ನೂ ಮೂವರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.

ಬೇಲೂರು ಕೈಗಾರಿಕಾ ಪ್ರದೇಶದ ಕೊನೆಯ ಗೇಟ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ತೇಗೂರ ಗ್ರಾಮದ ಅಕ್ಕಮ್ಮ ಎಂಬ ಮಹಿಳೆಯೇ ಸೇತುವೆಯಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದು, ಇನ್ನುಳಿದ ಮೂವರನ್ನ ಧಾರವಾಡದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಧಾರವಾಡದಿಂದ ಹೊರಟಿದ್ದ ಮಾಪ್ಸಾ ಮೂಲದ ಮೊಹ್ಮದ ಶರೀಫ ಬೆಳವಾಡಿ ಎಂಬುವವರಿಗೆ ಸೇರಿದ ಕಾರು, ಮನೆಗೆ ಹೊರಟಿದ್ದ ಮಹಿಳೆಯರ ಮೇಲೆ ಹೋಗಿದೆ. ತಪ್ಪಿಸಿಕೊಳ್ಳಲು ಆಗದೇ, ಕಾರು ಬಡಿದು ಮಹಿಳೆ ಮೇಲಿಂದ ಬಿದ್ದು ಸಾವಿಗೀಡಾಗಿದ್ದಾಳೆ.

ಘಟನೆಯ ಸುದ್ದಿ ತಿಳಿಯುತ್ತಿದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಗರಗ ಠಾಣೆಯ ಪೊಲೀಸರು ಮಹಿಳೆಯರನ್ನ ಆಸ್ಪತ್ರೆಗೆ ರವಾನಿಸಿ, ಕಾರಿನ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ತೇಗೂರ ಅಕ್ಕಮ್ಮ ಸೇರಿದಂತೆ ಇನ್ನುಳಿದ ಮಹಿಳೆಯರು ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಲಕ್ಷ್ಮೀ ನಾರಾಯಣ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆಂದು ಗೊತ್ತಾಗಿದೆ.

Leave a Reply

Your email address will not be published. Required fields are marked *