Exclusive- ಹುಬ್ಬಳ್ಳಿಯಲ್ಲಿ ಚಿನ್ನಾಭರಣ ಎಗರಿಸಿದ್ದವರು ಅಂದರ್- ವೀಡಿಯೋ ಸಮೇತ ನಮ್ಮಲ್ಲಿ ಮಾತ್ರ
1 min readಹುಬ್ಬಳ್ಳಿ: ಗ್ರಾಹಕರ ಸೋಗಿನಲ್ಲಿ ಪ್ರತಿಷ್ಠಿತ ಚಿನ್ನದ ಶೋರೂಂಗೆ ಹೋಗಿದ್ದ ಇಬ್ಬರೂ ಲಕ್ಷಾಂತರ ರೂಪಾಯಿಯ ಚಿನ್ನವನ್ನ ಎಗರಿಸಿ ಪರಾರಿಯಾಗಿದ್ದರು. ಘಟನೆಯ ದೂರು ಬಂದ ತಕ್ಷಣವೇ ಕಾರ್ಯಪೃವತ್ತರಾದ ಶಹರ ಠಾಣೆಯ ಪೊಲೀಸರು ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯ ಬಳಿಯಿರುವ ಕಲ್ಯಾಣ ಜುವೇಲರ್ಸನಲ್ಲೇ ಮೂರು ಲಕ್ಷ ತೊಂಬತ್ತೆಂಟು ಮೌಲ್ಯದ ಚಿನ್ನವನ್ನ ಎಗರಿಸಲಾಗಿತ್ತು. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಚಿತ್ರೀತವಾಗಿದ್ದು, ಆರೋಪಿಗಳನ್ನ ಧಾರವಾಡ ಮಾಳಮಡ್ಡಿ ಮಂಜುನಾಥಪುರದ ವಿರಕ್ತಾನಂದ ಮಹದೇವಪ್ಪ ಕಟಗಿ ಹಾಗೂ ಗದಗ ಸುಪ್ರಿಯಾ ಲಾಡ್ಜ ಬಳಿಯ ಶರತ ಶ್ರೀಕಾಂತ ಕಾರಂತ ಎಂದು ಗುರುತಿಸಲಾಗಿದ್ದು, ಮಹಿಳೆಯರು ಬಳಕೆ ಮಾಡುವ ಬಾಜುಬಂದಿ (ವಂಕಿ)ಯನ್ನ ಕಣ್ಣು ತಪ್ಪಿಸಿ ಎಗರಿಸಿದ್ದರು.
ಈ ಬಗ್ಗೆ ದೂರು ಎರಡು ದಿನದ ಹಿಂದೆ ದಾಖಲಿಸಿಕೊಂಡ ಶಹರ ಠಾಣೆ ಇನ್ಸ್ಪೆಕ್ಟರ್ ಎಂ.ಎಸ್.ಪಾಟೀಲ ಆರೋಪಿಗಳನ್ನ ಪತ್ತೆ ಹಚ್ಚಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಇಬ್ಬರು ಆರೋಪಿಗಳು ಕಲ್ಯಾಣ ಜ್ಯುವೇಲರಿಗೆ ಬಂದಾಗ ಮಾಸ್ಕ್ ಹಾಕಿಕೊಂಡು ಬಂದಿದ್ದರು. ಆಗಲೇ ಅಲ್ಲಿದ್ದ ನೌಕರರು ಮಾಸ್ಕ್ ತೆಗೆದು ಮುಖ ತೋರಿಸುವಂತೆ ಮಾಡಿದ್ದರು. ಇದಾದ ಕೆಲವೇ ಸಮಯದಲ್ಲಿ ಆಭರಣ ಎಗರಿಸಿದ್ದ ಆಸಾಮಿಗಳು, ಅಲ್ಲಿಂದ ಪರಾರಿಯಾಗಿದ್ದರು.