Karnataka Voice

Latest Kannada News

ಧಾರವಾಡ ಡಿಸಿ ಆಫೀಸ್ ಕ್ಯಾಂಟಿನ್ ಬೀಗ: 8ಲಕ್ಷಕ್ಕಾಗಿ ಕಿತ್ತಾಟ..!

ಧಾರವಾಡ: ಜಿಲ್ಲಾಧಿಕಾರಿ ಕಚೇರಿಯ ಆಡಳಿತದ ವ್ಯಾಪ್ತಿಗೆ ಬರುವ ಇಲ್ಲಿನ ಕ್ಯಾಂಟಿನ್ ಗೆ ಬೀಗ ಹಾಕಲಾಗಿದ್ದು, ಮೂಲ ಮಾಲೀಕರು ಹಣ ಭರಿಸದೇ ಇರುವುದೇ ಇದಕ್ಕೆ ಕಾರಣವೆನ್ನಲಾಗಿದೆ.

ಹಲವು ವರ್ಷಗಳಿಂದಲೂ ಕ್ಯಾಂಟಿನ್ ನಡೆಸುತ್ತಿದ್ದ ಮೂಲ ಮಾಲೀಕರು, ಪ್ರತಿವರ್ಷ ತುಂಬಬೇಕಾದ ಬಾಬತ್ತನ್ನ ತುಂಬದೇ ಮತ್ತೋಬ್ಬರಿಗೆ ನಡೆಸಲು ಕೊಟ್ಟಿದ್ದು, ನಂತರವೂ ಹಣ ತುಂಬದೇ ಇರುವುದೇ ಬೀಗ ಜಡಿಯುವುದಕ್ಕೆ ಕಾರಣವೆನ್ನಲಾಗಿದೆ.

ಸುಮಾರು 8 ಲಕ್ಷ ರೂಪಾಯಿ ಹಣವನ್ನ ಕಚೇರಿಗೆ ತುಂಬಬೇಕಾಗಿದ್ದು, ಮೂಲ ಮಾಲೀಕರಿಗೆ ಎಷ್ಟು ಸಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಹಾಗಾಗಿಯೇ ಇಂದು ಕ್ಯಾಂಟೀನ್ ಗೆ ಬೀಗ ಹಾಕಲಾಗಿದೆ.

ಜಿಲ್ಲಾಧಿಕಾರಿ ಅಧೀನದಲ್ಲಿರುವ ಕ್ಯಾಂಟಿನ ಹಣ 8 ಲಕ್ಷ ರೂಪಾಯಿ ಆಗುವವರೆಗೆ ಭರಣಾ ಮಾಡಿಸದೇ ಇರುವುದಕ್ಕೆ ಕಾರಣವೇನು ಎಂಬುದು ನಿಖರವಾಗಿ ತಿಳಿದು ಬಂದಿಲ್ಲವಾದರೂ, ಜಿಲ್ಲಾಧಿಕಾರಿ ಕಚೇರಿಗೆ ಬಂದವರಿಗೆ ತೊಂದರೆಯಾಗಿದ್ದಂತೂ ಸತ್ಯ.

Leave a Reply

Your email address will not be published. Required fields are marked *