ಐಪಿಎಸ್ ಲಾಬು ರಾಮ್ ಪೊಲೀಸ್ ಕಮೀಷನರಾಗಿ ಅಧಿಕಾರ ಸ್ವೀಕಾರ
1 min readಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರಾಗಿ ಐಪಿಎಸ್ ಅಧಿಕಾರಿ ಲಾಬು ರಾಮ್ ಇಂದು ಅಧಿಕಾರ ಸ್ವೀಕಾರ ಮಾಡಿದ್ದು, ಅವಳಿನಗರದ ಬಹುತೇಕ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಇಂದು ಮಧ್ಯಾಹ್ನದ ವೇಳೆಗೆ ಆಗಮಿಸಿದ ಪೊಲೀಸ್ ಕಮೀಷನರ್ ಲಾಬು ರಾಮ್ ಪೊಲೀಸರಿಂದ ಗೌರವ ವಂದನೆ ಸ್ವೀಕರಿ, ಆಯುಕ್ತರ ಕಚೇರಿಯೊಳಗೆ ನಡೆದರು. ಡಿಸಿಪಿ ಪಿ.ಕೃಷ್ಣಕಾಂತ ಅವರು ಸ್ಥಳೀಯವಾಗಿ ಮಾಹಿತಿಯನ್ನ ನೀಡುತ್ತಿದ್ದರು. ತದನಂತರ ಅವಳಿನಗರದ ಬಹುತೇಕ ಠಾಣೆಗಳ ಪೊಲೀಸ್ ಅಧಿಕಾರಿಗಳನ್ನ ಭೇಟಿ ಮಾಡಿದ್ರು.
ಇನ್ನೆರಡು ದಿನದಲ್ಲಿ ಸಂಪೂರ್ಣವಾಗಿ ಅವಳಿನಗರದ ಪರಿಸ್ಥಿತಿಯ ಅವಲೋಕನ ಮಾಡಿಕೊಂಡು ಸ್ಪಷ್ಟವಾಗಿ ಏನು ಮಾಡಬಹುದೆಂದು ಹೇಳುವುದಾಗಿ ಕಮೀಷನರ್ ಹೇಳಿದರು. ಇಲಾಖೆಯಲ್ಲೇ ಹಲವು ಗೊಂದಲಗಳಿಂದ ಪೊಲೀಸ್ ಆಯುಕ್ತರಾಗಿದ್ದ ಆರ್.ದಿಲೀಪ ವರ್ಗಾವಣೆಯಾಗಿದ್ದು, ಹಿರಿಯ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಾಗಿತ್ತು.