Karnataka Voice

Latest Kannada News

ಕಲಘಟಗಿ ಪೊಲೀಸರ ಕಾರ್ಯಾಚರಣೆ ಬೈಕ್ ಕಳ್ಳನ ಬಂಧನ

ಧಾರವಾಡ: ಜಿಲ್ಲೆಯ ಹುಬ್ಬಳ್ಳಿ ಸೇರಿದಂತೆ ವಿವಿದೆಢೆ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಬಂಧನ ಮಾಡುವಲ್ಲಿ ಕಲಘಟಗಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಲಘಟಗಿಯ ಬಸವೇಶ್ವರನಗರದ ನಿವಾಸಿಯಾಘಿರುವ ಜೈಲಾನಿ ಬಾಷಾಸಾಬ ಗಂಜಿಗಟ್ಟಿ ಎಂಬಾತನನ್ನ ಬಂಧನ ಮಾಡಲಾಗಿದ್ದು, ಬಂಧಿತನಿಂದ 9 ದ್ವಿಚಕ್ರವಾಹನಗಳ ವಶಕ್ಕೆ ಪಡೆಯಲಾಗಿದೆ.

ಆರೋಪಿತ ಹುಬ್ಬಳ್ಳಿಯಲ್ಲಿನ ಏಳು ಬೈಕ್ ಹಾಗೂ ಕಲಘಟಗಿ 2 ಬೈಕುಗಳನ್ನ ಕಳ್ಳತನ ಮಾಡಿರುವುದನ್ನ ಒಪ್ಪಿಕೊಂಡಿದ್ದು, 9 ಬೈಕುಗಳ ಮೌಲ್ಯ 2 ಲಕ್ಷ ರೂಪಾಯಿಗಳಾಗಿದ್ದು, ಹೆಚ್ಚಿನ ಮಾಹಿತಿಯನ್ನ ಕಲೆ ಹಾಕಲಾಗುತ್ತಿದೆ.

ಬೈಕ್ ಕಳ್ಳತನದ ಬಗ್ಗೆ ಕಲಘಟಗಿಯ ಮಹ್ಮದರಫೀಕ  ಮಕ್ತುಂಸಾಬ ಸನದಿ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿದ್ದಾರೆ. ಇನ್ಸಪೆಕ್ಟರ್ ವಿಜಯ ಬಿರಾದಾರ ನೇತೃತ್ವದಲ್ಲಿ ಎಎಸ್ಐ ಕೆ.ಎಂ.ಮಠಪತಿ, ಸಿಬ್ಬಂದಿಗಳಾದ ಎಸ್.ಡಿ.ಮಲ್ಲನಗೌಡರ, ಎನ್.ಎಂ.ಹೊನ್ನಪ್ಪನವರ, ಎಂ.ಎಲ್.ಪಾಶ್ಚಾಪುರ, ಚೆನ್ನಪ್ಪ ಬಳ್ಳೋಳ್ಳಿ, ಎನ್.ಎಂ.ಸಂಶಿ, ಎನ್.ಪಿ.ಮೇಟಿ, ಎನ್.ಬಿ.ಬೋಗೂರ, ಶಿವಾನಂದ ಕಾಂಬಳೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *