‘ದುಂಡಿ ಪರಸ್ಯಾ’ನಿಗೆ ಮಣ್ಣು ಮುಕ್ಕಿಸಿದ ‘ಹುಚ್ಚ ನಿಂಗ್’
1 min readಧಾರವಾಡ: ತೀವ್ರ ಕುತೂಹಲ ಕೆರಳಿಸಿದ್ದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅತೀವ ಕಾವು ಮೂಡಿಸಿದ್ದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮ ಪಮಚಾಯತಿ ಚುನಾವಣೆಯಲ್ಲಿ ಸೋಲಿಲ್ಲದೇ ಬೀಗುತ್ತಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸೋಲುಣಿಸಿದ್ದಾರೆ.
ಮುಕ್ಕಲ ಗ್ರಾಮದ ಪರಶುರಾಮ ದುಂಡಿ ಮುಕ್ಕಲ ಗ್ರಾಮದ 1ನೇ ವಾರ್ಡಿನಲ್ಲಿ ಚುನಾವಣೆ ಎದುರಿಸಿದ್ದರು. ಕಳೆದ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಪರಶುರಾಮ ದುಂಡಿಯನ್ನ ಗ್ರಾಮದಲ್ಲಿ ಪರಸ್ಯಾ ದುಂಡಿಯಂದೇ ಕರೆಯುವುದುಂಟು. ಹಾಗಾಗಿಯೇ, ಈ ಬಾರಿ ಅವರ ಎದುರಾಳಿಯಾಗಿ ನಿಂಗಪ್ಪ ಶಿಗ್ಗಾಂವಿಯನ್ನ ನಿಲ್ಲಿಸಲಾಗಿತ್ತು.
ಗ್ರಾಮ ಪಂಚಾಯತಿ ಚುನಾವಣೆ ಪೂರ್ವದಿಂದಲೂ ನಿಂಗಪ್ಪ ಶಿಗ್ಗಾಂವಿಯವರನ್ನ ಗ್ರಾಮದಲ್ಲಿ ಹುಚ್ಚ ನಿಂಗ್ ಎಂದು ಕರೆಯುತ್ತಾರೆ. ಚುನಾವಣೆಯ ಸಮಯದಲ್ಲಿ ಸಾಕಷ್ಟು ಪರಿಶ್ರಮ ಪಟ್ಟಿದ ಪರಸ್ಯಾ ಇಂದು ನಿಂಗ್ ನಿಂದ ಮಣ್ಣು ಮುಕ್ಕಿರುವುದು ಮುಕ್ಕಲ ಗ್ರಾಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮೊದಲು ಕಾಂಗ್ರೆಸನಲ್ಲಿದ್ದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಗೆ ಹೋಗಿದ್ದ ಪರಶುರಾಮ ದುಂಡಿ, ಇಂದು ಅದೇ ಕಾಂಗ್ರೆಸ್ ಅಭ್ಯರ್ಥಿಯಿಂದ ಸೋಲನ್ನ ಅನುಭವಿಸಿದ್ದು ಕಾಕತಾಳೀಯವಾಗಿದೆ.