ಹೆಂಡ್ತಿ ಕೊಲೆ ಮಾಡಿ, ಕಿಮ್ಸನಲ್ಲಿದ್ದಾತ ನ್ಯಾಯಾಂಗ ಬಂಧನಕ್ಕೆ
1 min readಧಾರವಾಡ: ಏಳು ಹೆಜ್ಜೆಗಳನ್ನಿಟ್ಟು ಇನ್ನೂ ಏಳು ತಿಂಗಳು ಕಳೆದಿದರಲಿಲ್ಲ. ಅಷ್ಟರಲ್ಲಿಯೇ ಪಾಪಿ ಪತಿರಾಯ ಪತ್ನಿಯನ್ನ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಕಿಮ್ಸಗೆ ದಾಖಲಾಗಿದ್ದ ಕಲಘಟಗಿ ತಾಲೂಕಿನ ಹುಲಗಿನಕಟ್ಟಿ ಗ್ರಾಮದ ಆರೋಪಿಯನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಲಕ್ಷ್ಮೀ ಚಿಕ್ಕಮ್ಮನವರ ಎಂಬ ಮಹಿಳೆಯನ್ನ ಪತಿ ವೀರಭದ್ರನೇ ಹೊಲದಲ್ಲಿ ಕೊರಳಿಗೆ ಉರುಲು ಹಾಕಿ ಕೊಲೆ ಮಾಡಿದ್ದ. ಅಷ್ಟೇ ಅಲ್ಲ, ತಾನೂ ಕೂಡಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಹಾಗಾಗಿಯೇ ಆತನನ್ನ ಪೊಲೀಸ್ ಕಸ್ಟಡಿಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು.
ಆರೋಪಿ ವೀರಭದ್ರನ ಆರೋಗ್ಯ ಸುಧಾರಣೆಯಾದ ಹಿನ್ನೆಲೆಯಲ್ಲಿ ಕಲಘಟಗಿ ಠಾಣೆಯ ಪೊಲೀಸರು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆತನನ್ನ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪತಿ ವೀರಭದ್ರ ಹೆಂಡತಿಯನ್ನ ತನ್ನದೇ ಸಂಬಂಧಿಕರ ಹೊಲಕ್ಕೆ ಕರೆದುಕೊಂಡು ಹೋಗಿ, ಆಕೆಯ ಕೊರಳಿಗೆ ಉರುಲು ಹಾಕಿ ಕೊಲೆ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.