ಮಾವಿನಕೊಪ್ಪದ ಬಳಿ ಭೀಕರ ರಸ್ತೆ ಅಪಘಾತ, ರಸ್ತೆಯುದ್ದಕ್ಕೂ ಬಿದ್ದ ಶವ, ಗಾಯಾಳು..

ಧಾರವಾಡ: ನಗರದಿಂದ ಹಳಿಯಾಳದತ್ತ ಹೊರಟಿದ್ದ ಬೈಕಿಗೆ ಎದುರಿನಿಂದ ಬಂದ ಓಮಿನಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಓರ್ವ ಬೈಕ ಸವಾರ ಸಾವನ್ನಪ್ಪಿ, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ಮಾವಿನಕೊಪ್ಪ ಗ್ರಾಮದ ಬಳಿ ಸಂಭವಿಸಿದೆ.
ಸಚಿನ ಎಂಬುವವರಿಗೆ ಸೇರಿದ ಬೈಕಿನಲ್ಲಿದ್ದ ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಅಜಯ ಹಾಗೂ ಸುರೇಶ ಹೋಗುತ್ತಿದ್ದ ಸಮಯದಲ್ಲಿ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಓಮಿನಿ ವ್ಯಾನ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಓರ್ವ ಯುವಕ ಸಾವಿಗೀಡಾಗಿದ್ದು, ಓಮಿನಿ ವ್ಯಾನ್ ಚಾಲಕ ಶಿವಾನಂದ ಗದಿಗೆಪ್ಪ ಹಡಪದ ಎಂಬಾತನಿಗೂ ಗಾಯಗಳಾಗಿವೆ.
ಬೈಕಿನಲ್ಲಿದ್ದ ಓರ್ವ ಯುವಕ ಸಾವನ್ನಪ್ಪಿದ್ದು, ಇನ್ನೋರ್ವ ಯುವಕನನ್ನ ಮೊದಲು ಹಳಿಯಾಳದಲ್ಲಿ ಚಿಕಿತ್ಸೆ ನೀಡಿ, ನಂತರ ಕಿಮ್ಸಗೆ ರವಾನೆ ಮಾಡಿದ್ದಾರೆ. ಘಟನೆಯ ಬಗ್ಗೆ ದೂರು ದಾಖಲು ಮಾಡಿಕೊಂಡಿರುವ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.