Karnataka Voice

Latest Kannada News

ಛೇ.. ಆಕೆಯೊಂದಿಗೆ ಬಂದಿದ್ದ ‘ಆ’ ಹುಡುಗ ಪತ್ತೆಯಾಗಲೇ ಇಲ್ಲ.. ಕಾರ್ಯಾಚರಣೆ ನಿಂತಿದೆ..!

ಪತ್ತೆಯಾಗದ ಜೋಶಿ ಜಂಗಮ ಎಂಬ ಯುವಕನ ಮದುವೆ ನಿಶ್ಚಿತಾರ್ಥ ನತಾಶಾ ಬಂಢಾರಿ ಎಂಬ ಯುವತಿಗೆ ನಡೆದು ವರ್ಷವೇ ಕಳಿದಿದೆ. ಆದರೆ, ಮನೆಯಲ್ಲಿ ಇನ್ನೂ ಮದುವೆಯ ದಿನಾಂಕ ನಿಗದಿಯಾಗಿಲ್ಲ. ಆಕೆಯೀಗ ಬದುಕುಳಿದಿದ್ದು, ಸಾಯುವವರೆಗೂ ಇರಬೇಕಾದವನೂ ಮಾತ್ರ ಸಿಗದೇ ಇರುವುದು ಆಕೆಯನ್ನ ಮತ್ತಷ್ಟು ಘಾಸಿಗೊಳಿಸಿದೆ…

ಹುಬ್ಬಳ್ಳಿ: ತಾಲೂಕಿನ ಕಿರೇಸೂರ ಬಳಿಯಲ್ಲಿ ನಡೆದ ದುರಂತವೊಂದರಲ್ಲಿ ಕಾಣೆಯಾಗಿದ್ದ ಮೂರು ಯುವಕರ ಪೈಕಿ ಇಬ್ಬರ ಶವಗಳು ದೊರಕಿದ್ದು, ಮತ್ತೋರ್ವನ ಬಗ್ಗೆ ಯಾವುದೇ ಸುಳಿವು ಸಿಗದೇ, ಕತ್ತಲಾದ ಪರಿಣಾಮ ಕಾರ್ಯಾಚರಣೆಯನ್ನೂ ನಿಲ್ಲಿಸಲಾಗಿದೆ.

ಹುಬ್ಬಳ್ಳಿಯ ರಾಮನಗರದಿಂದ ಕಿರೇಸೂರಿನ ಬಳಿ ಮಲಪ್ರಭಾ ಸೇತುವೆ ಬಳಿ ಐವರಲ್ಲಿ ಓರ್ವ ಯುವತಿ ಹಾಗೂ ಯುವಕನೋರ್ವ ಜೇನು ಹುಳಗಳಿಂದಲೂ ತಪ್ಪಿಸಿಕೊಂಡು ಬದುಕುಳಿದಿದ್ದರು. ಆದರೆ, ಜೇನು ನೊಣಗಳಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ಜಿಗಿದಿದ್ದ ಮೂರು ಯುವಕರ ಪೈಕಿ ಓರ್ವನ ಪತ್ತೆಯಾಗದೇ ಇರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಸುಮಾರು 20 ಗಂಟೆಗಳ ಕಾರ್ಯಾಚರಣೆಯಲ್ಲಿ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಅವರ ಪುತ್ರ ಸನ್ನಿ ಹಾಗೂ ಅವರ ಸಂಬಂಧಿಯಾದ ಪೂನಾ ಮೂಲದ ಗಜಾನನ ರಾಜಶೇಖರ ಶವಗಳು ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಕೆನಾಲಿನಲ್ಲಿ ಸಿಕ್ಕಿವೆ. ಆದರೆ, ಜೋಶಿ ಕ್ಲೆಮೆಂಟ್ ಜಂಗಮ ಎಂಬ ಯುವಕನ ಪತ್ತೆ ಮಾತ್ರ ಇಲ್ಲಿಯವರೆಗೆ ಆಗಲೇ ಇಲ್ಲ.

ಮತ್ತೆ ಕತ್ತಲು ಕವಿದಿದ್ದರಿಂದ ಕಾರ್ಯಾಚರಣೆಯನ್ನ ನಿಲ್ಲಿಸಲಾಗಿದ್ದು, ಅಗ್ನಿಶಾಮಕ ದಳ ಹಾಗೂ ಅಣ್ಣಿಗೇರಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಲಾಲಸಾಬ ಜೂಲಕಟ್ಟಿ ಮಾಡಿದ ಪ್ರಯತ್ನ ಇನ್ನೂ ಫಲಕಾರಿಯಾಗಿಲ್ಲ.

Leave a Reply

Your email address will not be published. Required fields are marked *