HUDA ಅಧ್ಯಕ್ಷರಾಗಿ ರಾಬರ್ಟ್ ದದ್ಧಾಪುರಿ ನೇಮಕ- ಶಾಕೀರ ಸನದಿ ಅವರನ್ನ ಕೈಬಿಟ್ಟ ಪಡೆ…
ಬೆಂಗಳೂರು: ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರನ್ನಾಗಿ ರಾಬರ್ಟ್ ದದ್ಧಾಪುರಿ ಅವರನ್ನ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಶಾಕೀರ ಸನದಿ ಅವರ ಜಾಗಕ್ಕೆ ರಾಬರ್ಟ್ ಅವರನ್ನ ನೇಮಕ ಮಾಡಲಾಗಿದ್ದು, ದದ್ಧಾಪುರಿ ಅವರ ಬಹುದಿನದ ಕನಸು ನನಸಾಗಿದೆ. ಮೊದಲಿಂದಲೂ ಸಿಎಂ ಶಿವಕುಮಾರ ಅವರ ಜೊತೆ ಒಡನಾಟ ಹೊಂದಿದ್ದ ರಾಬರ್ಟ್ ಅವರಿಗೆ ಹುಡಾ ಅಧ್ಯಕ್ಷಗಿರಿ ಸಿಕ್ಕಂತಾಗಿದೆ.
ಕಳೆದ ಕೆಲವು ತಿಂಗಳಗಳ ಹಿಂದೆ ಶಾಕೀರ ಅವರನ್ನ ಬದಲಾವಣೆ ಮಾಡುತ್ತಾರೆಂದು ಹೇಳಲಾಗಿತ್ತಾದರೂ, ಅವರನ್ನೇ ಮುಂದುವರೆಸಿ ಆದೇಶ ಹೊರಡಿಸಲಾಗಿತ್ತು.
