ಹುಬ್ಳಿ-ಧಾರವಾಡದಲ್ಲಿ DJ ಪರ್ಮಿಷನ್ ಕೊಟ್ಟಿಲ್ಲ, ಕೊಡೋದು ಇಲ್ಲಾ: ಪೊಲೀಸ್ ಕಮೀಷನರ್ ಖಡಕ್ ಹೇಳಿಕೆ…
ಧಾರವಾಡ: ಈದ್ ಮಿಲಾದ ಪ್ರಯುಕ್ತ ಹುಬ್ಬಳ್ಳಿ ಧಾರವಾಡದಲ್ಲಿ ಡಿಜೆಗೆ ಅವಕಾಶ ನೀಡಿಲ್ಲ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಸ್ಪಷ್ಟ ಹೇಳಿಕೆ ನೀಡಿದರು.
ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪರ್ಮಿಷನ್ ತುಗೋಂಡಿದ್ದೀವಿ ಹಾಗೇ ಹೀಗೆ ಎಂದಿರುವುದು ಏನೂ ಇಲ್ಲ. ನಾನು ಕಮೀಷನರ್ ಆಗಿ ಹೇಳುತ್ತಿದ್ದೇನೆ. ಯಾವುದೇ ಅವಕಾಶ ಇಲ್ಲವೆಂದರು.
ನಿನ್ನೆ ಕಾಂಗ್ರೆಸ್ ಮುಖಂಡ ಅಬ್ದುಲ್ ದೇಸಾಯಿ ಯುವಕರಿಗೆ ಪರ್ಮಿಷನ್ ಸಿಕ್ಕಿದೆ ಎಂದು ಹೇಳಿದ್ದ ವೀಡಿಯೋ ವೈರಲ್ ಆಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.
