ಮಾರಡಗಿಯಲ್ಲಿ ಬಾವಿಗೆ ಹಾರಿ “ಪ್ರಾಣಬಿಟ್ಟ” ದ್ಯಾಮಣ್ಣ ಹಂಪಣ್ಣನವರ…!!!
ಧಾರವಾಡ: ಮಾನಸಿಕವಾಗಿ ಖಿನ್ನತೆಗೆ ಒಳಗಾದ ವ್ಯಕ್ತಿಯೋರ್ವ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಮಾರಡಗಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಮೃತನನ್ನ ದ್ಯಾಮಣ್ಣ ಹಂಪಣ್ಣನವರ ಎಂದು ಗುರುತಿಸಲಾಗಿದೆ. ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಹೆಬ್ಬಳ್ಳಿ ಬಳಿಯ ಬಾರ್ನಿಂದ ಹೆಚ್ಚು ಜನರು ವ್ಯಸನಿಗಳು ಆಗುತ್ತಿದ್ದು, ಇದರಿಂದಾಗಿಯೂ ದುರಂತಗಳು ಹೆಚ್ಚಾಗುತ್ತಿವೆ ಎಂದು ಹೇಳಲಾಗುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಗಮನವಹಿಸಬೇಕಿದೆ.
