40 ಗ್ರಾಂ ಚಿನ್ನ “60” ಸಾವಿರಕ್ಕೆ ‘ವತ್ತಿ’- 4ವರ್ಷದ ವ್ಯವಹಾರ: ಮೌನೇಶನ ಗುಂಡು… ಅಮಾಯಕ ಶಾಲಾ ಬಾಲಕಿಗೂ ಗಾಯ…!!!
ಧಾರವಾಡ: ನಾಲ್ಕು ವರ್ಷದ ಹಿಂದೆ 40 ಗ್ರಾಂ ಚಿನ್ನವನ್ನ 60 ಸಾವಿರ ರೂಪಾಯಿಗೆ ಅಡವಿಟ್ಟು ಮರಳಿ ಪಡೆಯಲು ಬಂದಾಗ ತಮಗೆ ಗುಂಡು ಹಾಕಿದ್ದಾನೆಂದು ಒಂದೇ ಕುಟುಂಬದ ಇಬ್ಬರು ಹೇಳಿಕೆ ನೀಡಿದ್ದು, ಶಾಲೆಯಿಂದ ಮನೆಗೆ ವಿದ್ಯಾರ್ಥಿನಿಯೂ ತನಗಾದ ನೋವನ್ನ ಹೇಳಿಕೊಂಡಿದ್ದಾಳೆ.
ಗರಗದ ಮೋಹನ ಜ್ಯುವೇಲರ್ಸ್ ಮಾಲೀಕ ಮೌನೇಶ ಪತ್ತಾರ ಗುಂಡಿನ ದಾಳಿ ನಡೆಸಿದ್ದು, ಜೀರಿಗಿವಾಡದ ಸಿದ್ಧಪ್ಪ ನಿಂಗಪ್ಪ ಹೊರಕೇರಿ ಹಾಗೂ ನಿಂಗಪ್ಪ ಫಕ್ಕೀರಪ್ಪ ಹೊರಕೇರಿ ತೀವ್ರವಾಗಿ ಗಾಯಗೊಂಡಿದ್ದು, ಗರಗದ ಶಾಲಾ ವಿದ್ಯಾರ್ಥಿನಿಗೂ ಗಾಯಗಳಾಗಿವೆ.
ಗಾಯಾಳುಗಳಿಗೆ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ನಡೆಸಲಾಗುತ್ತಿದೆ. ಬಿಜೆಪಿ ಮುಖಂಡ ಮಂಜುನಾಥ ಮಕ್ಕಳಗೇರಿ ಆಸ್ಪತ್ರೆಯಲ್ಲಿ ಗಾಯಾಳುಗಳ ಜೊತೆಗಿದ್ದು, ಸಹಕಾರ ನೀಡುತ್ತಿದ್ದಾರೆ.
