Posts Slider

Karnataka Voice

Latest Kannada News

ಧಾರವಾಡ: ಒಂದೇ ಒಂದು ಪೈಸೆಯಿಲ್ಲದ “ಬೌದ್ಧ ಬಿಕ್ಕು”ವನ್ನ ಹಣವಿದೆ ಎಂದು ಹತ್ಯೆ… ಪಾತಕರು ಸಿಕ್ಕಿದ್ದು “ಒಂದು ಮೆಸೇಜ್”ನಿಂದ…

Spread the love

ಧಾರವಾಡ: ಹಣದ ಆಸೆಗಾಗಿ ವ್ಯಕ್ತಿಯ ಕೊಲೆ; ಐವರು ಆರೋಪಿಗಳ ಪೈಕಿ ಮೂವರ ಬಂಧನ

ಧಾರವಾಡ: ಹಣದ ಆಮಿಷಕ್ಕಾಗಿ ವ್ಯಕ್ತಿಯೊಬ್ಬನನ್ನು ಅಪಹರಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿ ಶವವನ್ನು ಬಿಸಾಡಿದ್ದ ಭೀಕರ ಪ್ರಕರಣವನ್ನು ಧಾರವಾಡ ಗ್ರಾಮೀಣ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ದಾಖಲಾದ ಕೇವಲ 5 ದಿನಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ತಂಡ ಯಶಸ್ವಿಯಾಗಿದೆ.

​ಮುಂಡಗೋಡದ ಟಿಬೆಟಿಯನ್ ಕ್ಯಾಂಪ್ ನಂಬರ್ 1ರಲ್ಲಿ ವಾಸವಾಗಿದ್ದ ತಾತಿ ಧೂಂಡೂಪ (40 ವರ್ಷ) ಎಂಬುವವರನ್ನು ದಿನಾಂಕ 28-04-2026 ಮತ್ತು 29-04-2026ರ ಮಧ್ಯದ ಅವಧಿಯಲ್ಲಿ ಅಪಹರಿಸಲಾಗಿತ್ತು. ಆರೋಪಿಗಳು ಮೃತನನ್ನು ಇಟಿಗಾ ಕಾರಿನಲ್ಲಿ ಕರೆದೊಯ್ದು, ಹಣಕ್ಕಾಗಿ ಪೀಡಿಸಿ, ಕಾಲುಗಳನ್ನು ಕಟ್ಟಿ ಹಾಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಧಾರವಾಡ-ಹುಬ್ಬಳ್ಳಿ ಬೈಪಾಸ್ ರಸ್ತೆಯ ಹಳೆಯಾಳ ಬ್ರಿಡ್ಜ್ ಹತ್ತಿರ ಎಸೆದು ಪರಾರಿಯಾಗಿದ್ದರು.

ಬಂಧಿತ ಆರೋಪಿಗಳ ವಿವರ: 

  1. ಸಂಕೇತ ಸತ್ತಪ್ಪ ಯಾದವ (24 ವರ್ಷ): ನಿವಾಸಿ ಪಾಂಡಿ ವರೆ, ತಾ: ಬುಧರಗಡ್, ಜಿಲ್ಲೆ: ಕೊಲ್ಲಾಪುರ.
  2. ವೈಭವ ಚವ್ವಾಣ (30 ವರ್ಷ): ನಿವಾಸಿ ಬಾಂಬಾರ, ತಾ: ಬುಧರಗಡ್, ಜಿಲ್ಲೆ: ಕೊಲ್ಲಾಪುರ.
  3. ಸಿದ್ಧೇಶ ಸುನೀಲ ಬೋಸ್ಲೆ (18 ವರ್ಷ): ನಿವಾಸಿ ಪಿಂಪಳಗಾವ, ತಾ: ಬುಧರಗಡ್, ಜಿಲ್ಲೆ: ಕೊಲ್ಲಾಪುರ.

​ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಗುಂಜನ್ ಆರ್ಯ (IPS) ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ತನಿಖೆಯಲ್ಲಿ ಶಿವಾನಂದ ಕಟಗಿ: ಡಿ.ಎಸ್.ಪಿ (L&O),  ವಿನೋದ ಮುಕ್ತೆದಾರ್: ಡಿ.ಎಸ್.ಪಿ, ಧಾರವಾಡ ಗ್ರಾಮೀಣ ಉಪ-ವಿಭಾಗ, ಎಸ್.ಎಸ್. ಕಮತಗಿ: ಸಿ.ಪಿ.ಐ, ಧಾರವಾಡ ಗ್ರಾಮೀಣ, ಪ್ರವೀಣ ಕೋಟಿ: ಪಿ.ಎಸ್.ಐ, ಧಾರವಾಡ ಗ್ರಾಮೀಣ, ಇವರೊಂದಿಂಗೆ ಸಿಬ್ಬಂದಿಗಳು ಮತ್ತು ತಾಂತ್ರಿಕ ವಿಭಾಗದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ಉತ್ತರ ಕನ್ನಡ ಜಿಲ್ಲಾ ಪೊಲೀಸರು ಮತ್ತು ಮಹಾರಾಷ್ಟ್ರ ರಾಜ್ಯ ಪೊಲೀಸರು ಈ ತನಿಖೆಗೆ ಅಗತ್ಯ ಸಹಕಾರ ನೀಡಿದ್ದಾರೆ.

​ಸಿಸಿಟಿವಿ ದೃಶ್ಯಾವಳಿ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಪೊಲೀಸ್ ತಂಡದ ಈ ಚಾಣಾಕ್ಷತನದ ಕೆಲಸವನ್ನು ಎಸ್‌ಪಿ ಗುಣಜನ್ ಆರ್ಯ ಅವರು ಶ್ಲಾಘಿಸಿದ್ದಾರೆ.


Spread the love

Leave a Reply

Your email address will not be published. Required fields are marked *