“ಒಳ್ಳೆಯವರಿಗೆ ಕಾಲವಲ್ಲ ಇದು” ರಾಷ್ಟ್ರಪತಿ ಪದಕ ಪುರಸ್ಕೃತ ವಿದ್ಯಾಗಿರಿ ಠಾಣೆ ಇನ್ಸಪೆಕ್ಟರ್ ಮೊಹ್ಮದರಫೀಕ ತಹಶೀಲ್ದಾರ್ ಅಮಾನತ್ತು…!!!!
ಧಾರವಾಡ: ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿದ್ದಾಗಲೇ ರಾಷ್ಟ್ರಪತಿ ಪದಕ ಪಡೆದಿದ್ದ ಪೊಲೀಸ್ ಇನ್ಸಪೆಕ್ಟರ್ ಮೊಹ್ಮದರಫೀಕ ತಹಶೀಲ್ದಾರ್, ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಸ್ಪೆಂಡ್ ಆಗಿದ್ದಾರೆ.
ಓರ್ವ ಸಿಬ್ಬಂದಿ ಮಾಡಿದ್ದು ಎನ್ನಲಾದ ತಪ್ಪಿನಿಂದ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಮೂವರು ಸಿಬ್ಬಂದಿಗಳನ್ನ ಅಮಾನತ್ತು ಮಾಡಲಾಗಿದ್ದು, ಏನೂ ತಪ್ಪು ಮಾಡದ ಇನ್ಸಪೆಕ್ಟರ್ ತಹಶೀಲ್ದಾರ್ ಕೂಡಾ ಅಮಾನತ್ತು ಮಾಡಿರುವುದು ಸೋಜಿಗ ಮೂಡಿಸಿದೆ.
https://www.instagram.com/reel/DXv8CpAuYtV/?igsh=czh1ejZlNjRtOGpl
ಬಿಎಸ್ಸಿ ವಿದ್ಯಾರ್ಥಿಯೋರ್ವ ಪೊಲೀಸರು ಹಣ ಪಡೆಯಲು ಪೀಡಿಸಿದರೆಂದು ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪ್ರತಿಭಟನೆ ಕೂಡ ನಡೆದಿದ್ದವು.
