Posts Slider

Karnataka Voice

Latest Kannada News

ಬೆಳಕಿನ ಕಡೆಗಿನ ಪಯಣ: ಬಾರವಾಡ ಗ್ರಾಮದಲ್ಲಿ ಸಾಬೀತಾದ ಹೆಣ್ಣಿನ ಅಸ್ತಿತ್ವದ ಘನತೆ… ಪ್ರತಿಯೊಬ್ಬರು ನೋಡಬೇಕಾದ ಮಾಹಿತಿಯಿಲ್ಲಿದೆ…

Spread the love

ಬೆಳಗಾವಿ: ನಿಪ್ಪಾಣಿ ತಾಲೂಕಿನ ಬಾರವಾಡ ಗ್ರಾಮದಲ್ಲಿ ಹೆಣ್ಣು ಮಗುವಿನ ಜನನವನ್ನು ಗ್ರಾಮಸ್ಥರು ಅಪರೂಪದ ಹಬ್ಬದಂತೆ ಆಚರಿಸಿ, ಸಮಾಜಕ್ಕೆ ಹೊಸ ಸಂದೇಶವನ್ನು ಸಾರಿದ್ದಾರೆ.

​ಸುಮನ ಮತ್ತು ಸಂಭಾಜಿ ಥೊರಾವತ್ ದಂಪತಿಗಳಿಗೆ ಹೆಣ್ಣು ಮಗು ಜನಿಸಿದ ಸುದ್ದಿ ತಿಳಿಯುತ್ತಿದ್ದಂತೆ, ಗ್ರಾಮದಾದ್ಯಂತ ಸಂತಸ ಮನೆಮಾಡಿತು. ಈ ಮುನ್ನ ಹೆಣ್ಣು ಮಗುವಿನ ಜನನವನ್ನು ಕೀಳರಿಮೆಯಿಂದ ನೋಡುತ್ತಿದ್ದ ಕಾಲವೊಂದಿತ್ತು. ಆದರೆ, ಇಂದಿನ ಈ ಬದಲಾವಣೆ ಗ್ರಾಮದ ಮನೋಭಾವದಲ್ಲಿ ಆಗಿರುವ ಕ್ರಾಂತಿಕಾರಿ ಬೆಳವಣಿಗೆಯನ್ನು ಎತ್ತಿ ತೋರಿಸಿದೆ.

​ಮಗುವಿನ ಆಗಮನದ ಅಂಗವಾಗಿ ಮನೆಯ ಮುಂದೆ ಸುಂದರ ರಂಗೋಲಿಗಳನ್ನು ಬಿಡಿಸಿ ಸ್ವಾಗತಿಸಲಾಯಿತು. ಡೋಲು, ತಾಸೆ ಮತ್ತು ಹಲಗೆಯ ನಾದಗಳೊಂದಿಗೆ ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದರು. ಮಹಿಳೆಯರು ಮಗುವನ್ನು ಮಡಿಲಲ್ಲಿಟ್ಟು ಆಶೀರ್ವದಿಸಿದರೆ, ಯುವಕರು ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿ ಹೊಸ ಪರಂಪರೆಗೆ ಮುನ್ನುಡಿ ಬರೆದರು.

​”ಮಗಳು ಮನೆಗೆ ಲಕ್ಷ್ಮಿ ಎಂಬುದು ಕೇವಲ ಮಾತಲ್ಲ, ಇದು ನಮ್ಮ ಬದುಕಿನ ನಿಜವಾದ ಭಾಗ್ಯ” ಎಂದು ಗ್ರಾಮದ ಹಿರಿಯರು ಹರ್ಷ ವ್ಯಕ್ತಪಡಿಸಿದರು. ಹೆಣ್ಣು ಮಗುವಿನ ಜನನವು ಕೇವಲ ಒಂದು ಕುಟುಂಬದ ಸಂತೋಷವಲ್ಲ, ಅದು ಇಡೀ ಸಮಾಜದ ಹೆಮ್ಮೆ ಮತ್ತು ಗೌರವದ ಸಂಕೇತ ಎಂದು ಬಾರವಾಡ ಗ್ರಾಮಸ್ಥರು ಈ ಮೂಲಕ ಸಾಬೀತುಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed