ಧಾರವಾಡ ಜಿಲ್ಲೆಯ ಡಿಡಿಪಿಐ ಕೆಳದಿಮಠ ಅವರ ಅಧಿಕಾರವಧಿ “ಕೊನೆಯ ಎರಡು ದಿನಗಳು ಮಾತ್ರ”…
ಧಾರವಾಡ: ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹುದ್ದೆಯಿಂದ ಎಸ್.ಎಸ್.ಕೆಳದಿಮಠ ಅವರು ಇನ್ನೂ ಎರಡೇ ದಿನದಲ್ಲಿ ನಿರ್ಗಮಿಸಲಿದ್ದಾರೆ.
ಕೆಳದಿಮಠ ಅವರು ನಿವೃತ್ತಿಯಾಗಲಿದ್ದು, ಅವರ ಸ್ಥಾನಕ್ಕೆ ಉತ್ತಮರನ್ನ ಧಾರವಾಡ ಜಿಲ್ಲಾ ಉಸ್ತುವಾರಿ ತರಬಹುದೆಂಬ ನಿರೀಕ್ಷೆಯನ್ನ ಶಿಕ್ಷಣ ಪ್ರೇಮಿಗಳು ಹೊಂದಿದ್ದಾರೆ.

ಕಳೆದ ಮೂರು ವರ್ಷದಿಂದ ಡಿಡಿಪಿಐ ಆಗಿದ್ದ ಎಸ್.ಎಸ್.ಕೆಳದಿಮಠ ಅವರು ಹಲವು ರೀತಿಯಲ್ಲಿ, ಬಹುತೇಕರಿಂದ ಮಾತನಾಡಿಸಿಕೊಂಡಿದ್ದರು. ಪ್ರತಿ ಕೆಡಿಪಿ ಸಭೆಯಲ್ಲೂ ಸಚಿವರಿಂದ ಗುಣಗಾನ ಮಾಡಿಸಿಕೊಂಡಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ಕೊನೆಗೂ ಅವರ ನಿರ್ಗಮನದ ದಿನ ಸಮೀಪಿಸುತ್ತಿದೆ. ಅದು ಇದೀಗ ಕ್ಷಣಗಳಾಗಿ ಮಾರ್ಪಟ್ಟಿದೆ. ಅವರ ವಯಕ್ತಿಕ ಜೀವನ ಸುಖಮಯವಾಗಿರಲಿ. ಆದರೆ, ಇಂತಹ ಅಧಿಕಾರಿ ಜಿಲ್ಲೆಗೆ ಬಾರದಿರಲಿ ಎಂಬುದು ಹಲವರ ಅಂಬೋಣವಾಗಿದೆ.
