Posts Slider

Karnataka Voice

Latest Kannada News

ಧಾರವಾಡದಲ್ಲಿ ಅಪಘಾತ- ಕೂದಲೆಳೆ ಅಂತರದಲ್ಲಿ ಪಾರಾದ ಅಡ್ವೋಕೇಟ್ “ಶರಣು ಅಂಗಡಿ”….

Spread the love

ಧಾರವಾಡ: ಬಿಆರ್‌ಟಿಎಸ್ ಮಾರ್ಗದಿಂದ ಹೊರಗೆ ಬಂದ ಪಾರ್ಚುನರ್ ವಾಹನಕ್ಕೆ ತಕ್ಷಣವೇ ಎದುರಿಗೆ ಬಂದ ಟ್ರ್ಯಾಕ್ಸ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಅಡ್ಟೋಕೇಟ್ ಶರಣು ಅಂಗಡಿ ಅವರಿದ್ದ ವಾಹನ ಸಂಪೂರ್ಣ ಜಖಂಗೊಂಡಿದ್ದು, ಶರಣು ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಘಟನೆಯು ಧಾರವಾಡದ ಎನ್‌ಟಿಟಿಎಫ್ ಬಳಿ ನಡೆದಿದ್ದು, ಟ್ರ್ಯಾಕ್ಸ್ ವಾಹನವು ಕೂಡಾ ಜಖಂಗೊಂಡಿದೆ. ಅಡ್ವೋಕೇಟ್ ಶರಣು ಅಂಗಡಿಯವರು ಕೂತಿದ್ದ ಭಾಗದಲ್ಲಿ ವಾಹನ ಜಖಂಗೊಂಡಿದೆ.

ಘಟನೆಗೆ ಸಂಬಂಧಿಸಿದಂತೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *