ಧಾರವಾಡದ “ವಿಮಲ್ ಹೊಟೇಲ್ ಕುಕ್ ಖಲ್ಲಾಸ್”- ನಗರದಲ್ಲಿ ಮತ್ತೊಂದು ಕೊಲೆ…!!!

ಧಾರವಾಡ: ನಗರದ ವಿಮಲ್ ಹೊಟೇಲ್ನಲ್ಲಿ ಕುಕ್ ಆಗಿದ್ದ ವ್ಯಕ್ತಿಯನ್ನ ಅದೇ ಹೊಟೇಲ್ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದವ ರಾಡ್ನಿಂದ ಹೊಡೆದು ಹತ್ಯೆ ಮಾಡಿರುವ ಪ್ರಕರಣ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಎಗ್ರೈಸ್ನಿಂದ ಆರಂಭಗೊಂಡಿದ್ದ ವಿಮಲ್ ಹೊಟೇಲ್ ಇಂದಿಗೂ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಕೊಡುತ್ತ ಬಂದಿದ್ದು, ಇಂತಹ ಹೊಟೇಲ್ನ ರೂಮ್ನಲ್ಲಿ ಇಂತಹ ಘಟನೆ ಸಂಭವಿಸಿದೆ.
ಹತ್ಯೆಗೀಡಾದವನನ್ನ ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದ ಫಕೀರೇಶ ಪ್ಯಾಟಿ ಎಂದು ಗುರುತಿಸಲಾಗಿದ್ದು, ಆರೋಪಿಯು ತಮಿಳುನಾಡು ಮೂಲದ ಕನೈಯಪ್ಪ ಕನಯ್ಯ ಕೇ ಎನ್ನಲಾಗಿದೆ. ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹತ್ಯೆಗೆ ನಿಖರವಾದ ಕಾರಣವನ್ನ ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.