Posts Slider

Karnataka Voice

Latest Kannada News

ಆಕೆಯನ್ನ ರಸ್ತೆಯಲ್ಲಿ ಕೊಂದ, ಪೊಲೀಸರಿಗೆ ಸಿಕ್ಕ, ಜೈಲಲ್ಲಿ ತಾನೇ ಸತ್ತಾ…!!

Spread the love

ಧಾರವಾಡ: ಪತಿ ಸತ್ತವಳನ್ನ ಪ್ರೀತಿಸಿ, ಆಕೆ ಬೇರೊಬ್ಬರ ಜೊತೆ ಇರಬಹುದೆಂಬ ಕಲ್ಪನೆಯಿಂದ ಆಕೆಯನ್ನ ಹತ್ಯೆ ಮಾಡಿ, ಜೈಲು ಸೇರಿದ್ದ ವ್ಯಕ್ತಿಯೋರ್ವ ತಾನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ.

ಹತ್ಯೆಗೀಡಾದ ಮಹಿಳೆಯ ಶವ

ಕಳೆದ ಆರು ದಿನಗಳ ಧಾರವಾಡದ ಸಿವಿಲ್ ಆಸ್ಪತ್ರೆಯ ಬಳಿ ಸವಿತಾ ಕಿತ್ತೂರ ಎಂಬ ಮಹಿಳೆಯನ್ನ ತಲ್ವಾರನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲು ಮಾಡಿಕೊಂಡಿದ್ದ ಉಪನಗರ ಠಾಣೆಯ ಪೊಲೀಸರು, ಆರೋಪಿ ಆನಂದ ದುಧನಿಯನ್ನ ಬಂಧಿಸಿ ಜೈಲಿಗಟ್ಟಿದ್ದರು.

ಆನಂದ ದುಧನಿ

ಇಂದು ಧಾರವಾಡದ ಸೆಂಟ್ರಲ್ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆಯಾದರೂ, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾನೆಂದು ಅನ್ನಲಾಗುತ್ತಿದೆ. ನಿಜ ಸತ್ಯವನ್ನ ಉಪನಗರ ಠಾಣೆ ಪೊಲೀಸರೇ ಪತ್ತೆ ಹಚ್ಚಬೇಕಿದೆ.


Spread the love

Leave a Reply

Your email address will not be published. Required fields are marked *