Karnataka Voice

Latest Kannada News

ಧಾರವಾಡ ಬಳಿ ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ: ಚಾಲಕ ಸುಟ್ಟು ಕರಕಲು…

ಧಾರವಾಡ: ವೇಗವಾಗಿ ಬಂದ ಪೆಟ್ರೋಲ್ ಟ್ಯಾಂಕರವೊಂದು ಪಲ್ಟಿಯಾಗಿ ರಸ್ತೆಯುದ್ದಕ್ಕೂ ಬೆಂಕಿ ಹೊತ್ತಿದ್ದು, ಚಾಲಕ ಸುಟ್ಟು ಕರಕಲಾದ ಘಟನೆ ಧಾರವಾಡ ತಾಲೂಕಿನ ಯರಿಕೊಪ್ಪದ ಬಳಿ ಈಗಷ್ಟೇ ಸಂಭವಿಸಿದೆ.

ಎಕ್ಸಕ್ಲೂಸಿವ್ ಪೋಟೋಗಳು

ಪೆಟ್ರೋಲ್ ಸಾಗಿಸುತ್ತಿದ್ದ ವೇಳೆಯಲ್ಲಿ ವಾಹನ ಪಲ್ಟಿಯಾಗಿದೆ. ಅದೇ ಸಮಯದಲ್ಲಿ ಬೆಂಕಿ ಹೊತ್ತಿದ್ದು, ರಸ್ತೆಯ ಬಹುಭಾಗದಲ್ಲಿ ಬೆಂಕ ಆವರಿಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಘಟನೆಯಲ್ಲಿ ಚಾಲಕ ಸುಟ್ಡು ಕರಕಲಾಗಿದ್ದು, ದೇಹದ ಬಹುಭಾಗ ಬೆಂದು ಹೋಗಿದ್ದು, ಗ್ರಾಮೀಣ ಠಾಣೆ ಪೊಲೀಸರು ಕೂಡಾ ಸ್ಥಳಕ್ಕೆ ದೌಡಾಯಿಸಿದ್ದಾರೆ.

Leave a Reply

Your email address will not be published. Required fields are marked *