Karnataka Voice

Latest Kannada News

3 ತಿಂಗಳ ಮಗುವನ್ನ ಹೊಟ್ಟೆಯಲ್ಲಿಕೊಂಡ “ಹೆಂಡತಿ” ಕೊಲೆಪಾತಕಿ ಎಂದ ಅತ್ತೆ….!

ಹುಬ್ಬಳ್ಳಿ: ಈಗ ಹೋಗಿ ಕೆಲವೇ ಹೊತ್ತಿನಲ್ಲಿ ಬರುತ್ತೇನೆ ಎಂದು ಹೋದ ವ್ಯಕ್ತಿಯೊಬ್ಬ ಬರ್ಭರವಾಗಿ ಹತ್ಯೆಯಾಗಿರುವ ಪ್ರಕರಣ ಹುಬ್ಬಳ್ಳಿ ತಾಲೂಕಿನ ನೂಲ್ವಿ ಬಳಿ ನಡೆದಿದೆ.

ಮೂಲತಃ ಕಮ್ಮಡೊಳ್ಳಿಯ ಶಂಭುಲಿಂಗ ಎಂಬ ಉಂಡಾಡಿ ಗುಂಡನೇ ಕೊಲೆಯಾಗಿದ್ದು, ಕೊಲೆಯಾದವನ ತಾಯಿ ಹತ್ಯೆ ಮಾಡಿದ್ದು ಸೊಸೆ ಎಂದು ಹೇಳುತ್ತಾಳೆಯಾದರೂ, ಸೊಸೆ ಮಾತ್ರ ದೇವರೇ ನೋಡಿಕೊಳ್ಳಲಿ ಎಂದು ಹಲಬುತ್ತಿದ್ದಾರೆ.

https://youtu.be/RvfURitEICc

ಪ್ರತಿದಿನವೂ ಹಣಕ್ಕಾಗಿ ಪೀಡಿಸುತ್ತಿದ್ದವನ ಹತ್ಯೆಯ ಹಿಂದೆ ಆಸ್ತಿಯ ಕರಿನೆರಳಿದೆ ಎಂಬುದು ತಾಯಿಯ ವಾದ. ಆದರೆ, ಮಡದಿ ಪ್ರೇಮಾ ಗರ್ಭಿಣಿಯಾಗಿದ್ದು, ತನಗೆ ಗಂಡ ಬೇಡವೇನು ಎಂದು ಪ್ರಶ್ನಿಸುತ್ತಿದ್ದಾಳೆ.

ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಾಹಿತಿಯನ್ನು ಕಲೆ ಹಾಕಿ, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.

Leave a Reply

Your email address will not be published. Required fields are marked *