Posts Slider

Karnataka Voice

Latest Kannada News

ನಿಮ್ಮ ಸಿಎಂಗೆ ಏನೂ ಕೀ…. ಆಗಿಲ್ಲಾ- ನಿಮ್ಮಿಂದ ಏನೂ ಆಗಲ್ಲ….!

Spread the love

ಹುಬ್ಬಳ್ಳಿ: ಹಲವು ದಿನಗಳಿಂದ 104ರ ಸಿಬ್ಬಂದಿಗಳು ಹೋರಾಟ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವೇಕೆ ಆಗುತ್ತಿಲ್ಲವೆಂಬ ಚಿಂತೆಗೆ ಇದೀಗ ಉತ್ತರ ಸಿಕ್ಕಿದ್ದು, ಕೇಂದ್ರದ ಮುಖ್ಯಸ್ಥನ ಮಾತಿನಿಂದಲೇ ಎಲ್ಲವೂ ಅರ್ಥವಾಗುವಂತಾಗಿದೆ.

ಸರಕಾರದ 104 – ಆರೋಗ್ಯ ಸಹಾಯವಾಣಿಯ ಗುತ್ತಿಗೆ ಪಡೆದ ಹೈದರಾಬಾದ್ ಮೂಲದ ಪಿರಾಮಲ್ ಸಂಸ್ಥೆ, ಸರಕಾರ ಹಾಗೂ ಈ ಸಹಾಯವಾಣಿಯ ಸಿಬ್ಬಂದಿಗೆ ವಂಚಿಸಿದ್ದು ಇದರ ವಿರುದ್ಧ ಬೆಂಗಳೂರು 104  ಆರೋಗ್ಯ ಸಹಾಯವಾಣಿಯ ಸಿಬ್ಬಂದಿ ಕಳೆದ 21 ದಿನ ಹಾಗೂ ಹುಬ್ಬಳ್ಳಿಯ ಸಿಬ್ಬಂದಿ ಕಳೆದ 15 ದಿನಗಳಿಂದ ಕರ್ತವ್ಯಕ್ಕೆ ಗೈರುಹಾಜರಾಗಿ ಪ್ರತಿಭಟಿಸುತ್ತಿದ್ದು ಅವರಿಗೆ ಸರಕಾರದ ನಿಯಮಾವಳಿಗಳ ಪ್ರಕಾರ ತಮಗೆ ಸಕಾಲದಲ್ಲಿ ವೇತನ, ವೇತನ ಮುಂಬಡ್ತಿ, ಕೋವಿಡ್ ಪ್ರೋತ್ಸಾಹ ಧನ ಇತರೆ ಸೌಲಭ್ಯಗಳನ್ನು ಸಿಬ್ಬಂದಿಗೆ ಕೊಡದೆ ಅನ್ಯಾಯ ಮಾಡುತ್ತಿದ್ದು ಜೊತೆಗೆ ಸರಕಾರಕ್ಕೂ ವಂಚಿಸುತ್ತಿದೆ.

1) 14410 – ಆಪ್ತಮಿತ್ರ ಸಹಾಯವಾಣಿ,

2) 181 –  ಮಹಿಳಾ ಸಹಾಯವಾಣಿ

3)  1075  – ಕೇಂದ್ರ ಕೋವಿಡ್ ಸಹಾಯವಾಣಿ ಗಳಿಗೆ ಸಂಬಂಧಿಸಿದ ಕೆಲಸಗಳನ್ನು ಇದೇ ಸಿಬ್ಬಂದಿಗಳಿಂದ ಕೆಲಸ ಮಾಡಿಸಿಕೊಂಡಿದ್ದು ಈ ಸಹಾಯವಾಣಿಗಳ ವೇತನವನ್ನು  104 ಆರೋಗ್ಯ ಸಹಾಯವಾಣಿ ಸಿಬ್ಬಂದಿಗೆ ನೀಡಿಲ್ಲ. ಇದಕ್ಕೆ ಕಾರಣ ಕೇಳಲು ಹೋದರೇ ಕೇಂದ್ರದ ಮುಖ್ಯಸ್ಥ ಮೊಹ್ಮದ ಯಾಕೂಬ್ ಮಾತನಾಡಿರುವುದನ್ನ ಕೇಳಿದರೇ ಎಂತವರಿಗೂ ಅಸಹ್ಯವೆನಿಸುತ್ತದೆ.

ಎಕ್ಸಕ್ಲೂಸಿವ್ ವೀಡಿಯೋ..

ಸಿಎಂ ಬಸವರಾಜ ಬೊಮ್ಮಾಯಿಯವರನ್ನೇ ಹೀಗೆ ಅಸಹ್ಯವಾಗಿ ಮಾತನಾಡುವ ಕೇಂದ್ರದವರಿಗೆ ಸರಕಾರ ತಕ್ಷಣವೇ ಕ್ರಮ ಜರುಗಿಸಬೇಕಿದೆ. ಅಷ್ಟೇ ಅಲ್ಲ, 104 ಸಿಬ್ಬಂದಿಗಳಿಗೆ ನ್ಯಾಯ ದೊರಕಿಸಬೇಕಿದೆ.


Spread the love

Leave a Reply

Your email address will not be published. Required fields are marked *