ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಮನೆಯಲ್ಲಿ ಬೆಂಕಿ… ತಪ್ಪಿದ ಭಾರೀ ದುರಂತ…

ಹುಬ್ಬಳ್ಳಿ: ಕಾರವಾರ ರಸ್ತೆಯಲ್ಲಿರುವ ಧಾರವಾಡ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ ಅವರ ಮನೆಯಲ್ಲಿ ವಿದ್ಯುತ್ ಮೀಟರ್ ನಲ್ಲಿ ಬೆಂಕಿ ಹತ್ತಿದ್ದು, ಸಮೀಪದಲ್ಲಿ ಗ್ಯಾಸ್ ಸಿಲೆಂಡರ್ ಯಿದ್ದ ಪರಿಣಾಮ ಆತಂಕಕ್ಕೆ ಕಾರಣವಾಗಿತ್ತು. ಅಗ್ನಿ ಶಾಮಕ ದಳದ ಕ್ಷಿಪ್ರ ಕಾರ್ಯಾಚರಣೆಯಿಂದ ಬಹುದೊಡ್ಡ ದುರಂತವೊಂದು ತಪ್ಪಿದೆ.
ಅನಿಲಕುಮಾರ ಪಾಟೀಲರ ಮನೆಯ ಎರಡು ಮೀಟರ್ ಗಳಲ್ಲಿ ಒಮ್ಮೆಲೆ ಬೆಂಕಿ ಹೊತ್ತಿದೆ. ಇದರಿಂದ ಮನೆಯಲ್ಲಿ ಹೊಗೆ ಸಂಪೂರ್ಣ ಆವರಿಸಿದೆ. ತಕ್ಷಣವೇ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬಂದು, ಹೊತ್ತಿದ ಬೆಂಕಿಯ ಸಮೀಪವಿದ್ದ ಸಿಲೆಂಡರ್ ಗಳನ್ನ ಹೊರಗೆ ಹಾಕಿ ಆಗಬಹುದಾದ ದುರಂತವನ್ನ ತಪ್ಪಿಸಿದ್ದಾರೆ.
ಅನಿಲಕುಮಾರ ಪಾಟೀಲ ಪ್ರತಿಕ್ರಿಯೆ: ಬೆಂಕಿ ಹೇಗೆ ಹೊತ್ತಿದೆ ಎಂಬುದು ಗೊತ್ತಿಲ್ಲ. ಈಗ ಹೆಸ್ಕಾಂನವರು ಬಂದು ತಪಾಸಣೆ ಮಾಡುತ್ತಿದ್ದಾರೆ. ಮನೆಯಲ್ಲಿ ವಿದ್ಯುತ್ ಅವಘಡದಿಂದ ದೊಡ್ಡ ದುರಂತ ನಡೆಯುವ ಸಾಧ್ಯತೆಯಿತ್ತು. ಅದನ್ನ ಅಗ್ನಿಶಾಮಕ ದಳದವರು ತಪ್ಪಿಸಿದ್ದಾರೆ. ಮನೆಯಲ್ಲಿ ಯಾರಿಗೂ ಏನು ಆಗಿಲ್ಲ. ವಿದ್ಯುತ್ ತೊಂದರೆಯಾಗಿದ್ದರಿಂದ ಎರಡು ದಿನ ಹೊಟೇಲ್ ನಲ್ಲಿ ಉಳಿಯುತ್ತಿದ್ದೇವೆ.